Wednesday 1 February 2017

ಲೇಖನ : ಬದುಕು ಬದಲಿಸಬಹುದು

ಲೇಖನ : ಬದುಕು ಬದಲಿಸಬಹುದು

ಅದೊಂದು ಸಂಜೆ ಏಕಾಂತದಲಿ ಕುಳಿತ ರಾಜೇಶ್ ಏನೋ ಯೋಚನೆ ಮಾಡುತ್ತಾ ಮುಳುಗಿ ಹೋಗಿದ್ದರು. "ಮದುವೆ ಆಗಿ ಮೂವತ್ತು ವರುಷವೇ ಆಗಿಹೋಯ್ತು. ಸವೆದ ದೇಹದ ಜಾಂಟ್ಗಳಿಂದ ಕರಕರ ಸದ್ದು ಬರತೊಡಗಿದೆ. ಮತ್ತೆ ಗ್ರೀಸ್ ಹಚ್ಚಲು ಹೆಂಡತಿಯ ಕರೆಯಬೇಕು. ಮೊನ್ನೆ ಮೊನ್ನೆ ರವಿ ನನ್ನ ವಯಸ್ಸಿನವನೇ ಹೇಳದೇ ಕೇಳದೇ ನಮ್ಮನ್ನೆಲ್ಲಾ ಬಿಟ್ಟು ಹೋದ. ಅವನ ಹೆಂಡತಿ ಮಕ್ಕಳ ಕತೆ ಏನು. ನಾನು ಹೆಂಡತಿಯ ಹತ್ತಿರ ಕುಳಿತು ಅದೆಷ್ಟು ಭಾರಿ ಹೇಳಬಯಸಿದ್ದೆ. ನಾಳೆ ನಾನು ಸತ್ತರೆ....!! ಛೇ.. ಬಿಡ್ತು ಅನ್ನಿ ಈ ಸಂಜೆಗೆ ಇದೆಂತಾ ಮಾತು ಎಂದು ಬಾಯಿ‌ ಮುಚ್ಚಿಸುತ್ತಿದ್ದಳು. ನಿಜವಾಗಿಯೂ ನಾಳೆ‌ ನಾನಿಲ್ಲದ ಅವಳ ಜೀವನ ಹೇಗಿರಬಹುದು.? ನನಗೆ ಅವಳು ಅವಳಿಗೆ ನಾನು. ನಮ್ಮ ಜೀವನ‌ ಮಕ್ಕಳಿಲ್ಲದಿದ್ದರೂ ಹಂಚಿಕೊಂಡು ನಡೆಯುತ್ತಿದೆ. ಆದರೆ ನನ್ನ ಬಾಳ ಸಂಗಾತಿ?! " ಎಂದು ಕಣ್ಣೀರು ಸುರಿಸಿದ.. ಭಾವನಾತ್ಮಕವಾಗಿ ಬೆಸೆದ ಜೀವವನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಲ್ಲ. ಅದೊಂದು ಕಡೆಯಾದರೆ ಇನ್ನೊಂದು ವ್ಯವಹಾರ.? ವ್ಯಾವಹಾರಿಕವಾಗಿ ಆಕೆ ಒಂದು ದಿನವೂ ತಲೆಹಾಕಲಿಲ್ಲ. ನಾನು ಎಷ್ಟು ದುಡಿಯುವೆ? ಎಷ್ಟು LIC ಪಾಲಿಸಿ ಮಾಡಿರುವೆ. ಎಲ್ಲೆಲ್ಲಾ ಸಾಲ ಕೊಟ್ಟಿದ್ದೇನೆ? ನನ್ನ ಆಸ್ತಿ ಎಷ್ಟು? ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ.. ATM password , ಸಾಲ ಪಡೆದಿದ್ದೇನಾ?! ಇದ್ಯಾವುದೂ ಅವಳಿಗೆ ತಿಳಿದಿಲ್ಲ. ‌ನಾನು ದುಡಿದು ತಂದಿದ್ದರಲ್ಲೇ ಅಚ್ಚುಕಟ್ಟಾಗಿ ಮನೆ ನಿರ್ವಹಿಸಿಕೊಂಡು ಹೋಗುತ್ತಿದ್ದಾಳೆ. ಇಲ್ಲ. ಇವತ್ತಾದರೂ ಹೇಳಲೇ ಬೇಕು. ಎಂದು ಹೆಂಡತಿಯ ಕರೆದ. ಮತ್ತೆ ಅದೇ ಮಾತನ್ನಾಡಲು ಹೋದಾಗ ತಡೆದಳು. ••
ನಿಜ. ಸಾವು ಕಠೋರ. ನಾವು ಬದುಕಿರುವ ವರೆಗೂ ಅದನ್ನು ಕೇಳಿಸಿಕೊಳ್ಳಲೂ ಮನಸ್ಸು ಮಾಡುವುದಿಲ್ಲ. ನಮ್ಮ ಜೀವನ ನೀರ ಮೇಲಿನ ಗುಳ್ಳೆಯಂತೆ. ಇಂದೋ?ನಾಳೆಯೋ ತಿಳಿಯದು. ಬದುಕಿರುವಾಗಲೇ ವಿಲ್ ಬರೆದೋ ಇಲ್ಲಾ ವ್ಯವಹಾರದ ಬಗ್ಗೆ ಒಂದು ಬಿಳಿಹಾಳೆಯಲ್ಲಿ ಬರೆದು ಇಟ್ಟಿರುವುದೇ ಒಳ್ಳೆಯದು. ಎಂದು ಅವಳಿರದ ಸಮಯದಲ್ಲಿ ವಿಲ್ ಬರೆದ..

ನೇಮೀಚಂದ್ರ ಅವರು ಬರೆದ ನಾಳೆ ಎಂಬುದು ನನಗಿಲ್ಲ. ಕಥೆಯ ಸಾರ..
(ಪುಸ್ತಕ: ಬದುಕು ಬದಲಿಸಬಹುದು ಭಾಗ-೩
ಸೋಲೆಂಬುದು ಅಲ್ಪವಿರಾಮ)

No comments:

Post a Comment