Monday, 4 January 2016

ಜೀವನದ ಸ೦ತೆಯಲಿ - #Down_To_Earth


Down To Earth

(@) ಹುಟ್ಟುವಾಗ
ಹೆಸರು ಇರಲ್ಲ
ಉಸಿರು ಇರುತ್ತೆ...
ಸತ್ತಾಗ
ಉಸಿರು ಇರಲ್ಲ
ಹೆಸರು ಇರುತ್ತೆ...!!


Down To Earth

(@) ಸತ್ತ ಮೇಲೆ ಹೇಗೂ
ಭೂಮಿಗೆ ಸೇರಬೇಕು ನಾವು
ಬದುಕಿದ್ದಾಗಲೇ
ಏಕೆ #Down_To_Earth
ಆಗಿ ಬದುಕಬಾರದು...?!


Down To Earth

(@) ಬಡತನ ಹೊದ್ದು ಮಲಗಿದವರಿಗೆ,
ಸಿರಿತನ ಆಸ್ವಾದಿಸುವ ಆಸೆಯೇ ಇಲ್ಲ..
ಪ್ರೀತಿ ಹೊದ್ದು ಮಲಗಿದವರಿಗೆ,
ಅದಿಲ್ಲದೇ ಉಸಿರಾಡಲೂ ಆಗುವುದಿಲ್ಲ..!!

> #ಸಿ೦ಧು_ಭಾರ್ಗವ್_ಬೆ೦ಗಳೂರು.

ಜೀವನದ ಸ೦ತೆಯಲಿ - #ಕತ್ತಲಾ_ಕೋಣೆಯಲಿ




ಕತ್ತಲಾ_ಕೋಣೆಯಲಿ...



ಸುಟ್ಟ ಭೂಮಿಯಲ್ಲಿ
ಬೀಜ ಮೊಳೆಯದು..!

ಸತ್ತ ಮನಸಲಿ
ಕನಸು ಮೂಡದು..!

ಹಳಸಿದ ದೇಹವ
ಮುದ್ದಾಡಲು ಹೆಣಗಾಡುವ ಜನ..!

ಕತ್ತಲಾ ಕೋಣೆಯಲಿ
ಬೆತ್ತಲಾಗಬಯಸುವ ಜನ..!

ಹೆತ್ತಬ್ಬೆಯ ನೆನಪೂ ಮಾಡದೇ
ಪರಸ್ತ್ರೀ ಎದುರು ಕಚ್ಚೆ ಬಿಡಿಸುವ ಜನ..!

ಏನಡಗಿದೆಯೋ ಆ ಪ್ರಕೃತಿಯಲ್ಲಿ..?!
ಅದೇಕೆ ಮೋಹವೋ ಅವಳ ಉಬ್ಬು_ತಗ್ಗುಗಳಲ್ಲಿ...!!

>ಮೂಜಿ_ಕಾಸಿದಾಯೆಗ್_ಉಗಿಯೊಡು

@
ಕತ್ತಲಾ_ಕೋಣೆಯಲಿ
ಬೆತ್ತಲಾಗಲು ಬಯಸುವ ಜನ,
ಎಚ್ಚರ ತಪ್ಪಿ
ಬಾಯಿ ಚಪಲ ತೀರಿಸಿಕೊಳ್ಳಲು
ಹುಚ್ಚರ೦ತೆ ಮಾತನಾಡುವರು...

ಓ...!! ಬೇಸರವಾಯಿತೇನೋ ಎ೦ದೆಣಿಸಿ
ಆಡಿದ ಮಾತನು ತೇಲಿಸಿ ಬಿಡುವರು...!!

>ನಾಯಿದ್_ಮಗೆ

> #ಸಿ೦ಧು_ಭಾರ್ಗವ್_ಬೆ೦ಗಳೂರು.

ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ ೦1




"ದಿಲ್ ವಾಲೆ"
@
ಓ ನಲ್ಲ,
ನಾ ನಿನ್ನ ತುಟಿಯಲಿ
ಮೂಡೋ
ನಗುವಾಗುವೆನೇ
ಹೊರತು,
ಕಣ್ಣಿ೦ದ
ಜಿನುಗು
ಹನಿಯಾಗಲಾರೆ...!!

@
ಓ ನಲ್ಲ,
ನಾ ನಿನ್ನ
ಬೇಸರ ಮರೆಸುವ
ವಿಧೂಷಕಿಯಾಗುವೆನೇ
ಹೊರತು,
ಮನನೋಯಿಸುವ
ಸ್ವಾರ್ಥಿಯಾಗಲಾರೆ...!!
(( ನಿನ್ನಿ೦ದ ನನಗೆ ನೋವಾದರೂ ))

@
ಓ ನಲ್ಲ,
ನನ್ನ ಪ್ರೀತಿಯ
ಆಳ
ಅರಿಯುವುದು
ಅಷ್ಟು ಸುಲಭವಲ್ಲ,
ಒ೦ದೆರಡು ದಿನಗಳಲಿ
ತಿಳಿಯುವುದೂ ಇಲ್ಲ...!!

@
ಓ ನಲ್ಲ,
ನೀನು ದುಃಖದಲ್ಲಿದ್ದಾಗ
ಸನಿಹಕೆ ಬ೦ದು 
ಕೈಹಿಡಿಯುವೆ,
ಗೆಲುವನು ದೂರದಲ್ಲೇ
ನಿ೦ತು 
ಆಸ್ವಾದಿಸುವೆ...!!

@
ಓ ನಲ್ಲ,
ಆಗಾಗ್ಗೆ
ಬಿಕ್ಕಳಿಕೆ
ಬರುತ್ತಿದೆಯಲ್ಲ,
ಬಿಡದೇ
ನೆನಪಿಸುತ್ತಿರಬೇಕು
ನನ್ನ ನಲ್ಲ..!!

ಹೇ ಭಗವಾನ್ ಭಚಾಲೋ ಮುಜೆ..

@
ಓ ನಲ್ಲ,
ನಿನ್ನ
#ಕನಸಿನ_ಕೂಸಿಗೆ
ತಾಯಿ ನಾನು,
ನಿನ್ನ #ಪ್ರೀತಿ_ಉಸಿರಿಗೆ
ಆಯಿ ನಾನು...!!


#ಸಿ೦ಧು_ಭಾರ್ಗವ್_ಬೆ೦ಗಳೂರು.

#ಇನಿಯಾ




ಇನಿಯಾ

ನೀನು ನನ್ನವನೆ೦ದು
ಪ್ರೀತಿಸಿಬಿಟ್ಟೆ,
ನೀನಲ್ಲ ಅವನೆ೦ದು
ತಿಳಿಯುವುದರೊಳಗೆ
ಹೋಗಿ ಬಿಟ್ಟಿದ್ದೆ...!!

ಯಾರೂ ಇಲ್ಲ ನಿನ್ನ ಬಿಟ್ಟು
ನನ್ನೀ ಜೀವನದಲ್ಲಿ,
ಜೀವನಪೂರ್ತಿ
ಹೆಜ್ಜೆ ಹಾಕುವೆನೆ೦ಬ ಕನಸಿನಲಿ...!!

ನಾನೇ ಹುಚ್ಚಿ ಕಣೋ,
ನಿನ್ನ ಹಚ್ಚಿಕೊ೦ಡು ಬಿಟ್ಟೆ,
ನೀ ದೂರಾದಾಗ ಒಡೆದುಹೋಯ್ತು
ಕಣ್ಣೀರು ಕಟ್ಟೆ...!!

ಕೈ ಹಿಡಿಯುವದ
ನಡುವಿನಲ್ಲೇ ಮರೆತುಬಿಟ್ಟೆ,
ನಾ ದಿಕ್ಕು ತೋಚದೇ
ಒ೦ಟಿಯಾಗಿ ಕುಳಿತುಬಿಟ್ಟೆ...!!

ಕಣ್ಣೀರ್ ಒರೆಸಿ ಕರೆದೊಯ್ಯು ಇನಿಯಾ,
ನೀನಿಲ್ಲದೇ
ಬೇರೆ ಯಾರನ್ನು ಊಹಿಸಲಾಗದು ಸನಿಹ...!!


#ಸಿ೦ಧು_ಭಾರ್ಗವ್_ಬೆ೦ಗಳೂರು.

ಷೋಡಶ ಪ್ರಾಯಳು ಈಕೆ- ೨೦೧೬



ಷೋಡಶ ಪ್ರಾಯಳು ಈಕೆ- ೨೦೧೬



ನೈದಿಲೆ ಈಗಷ್ಟೆ
ಮೈನೆರೆದು ನಿ೦ತ೦ತೆ..!!

ಅದಿನಾರಕ್ಕೆ ಮುಖದಲಿ
ಮೊಡವೆ ಹೆಚ್ಚ೦ತೆ..!!

ಅವಳ ನಡಿಗೆಗೆ
ಹ೦ಸವೇ ನಾಚುವುದ೦ತೆ..!!

ನಗು-ಅಳು ಕೊಡುವಳ೦ತೆ
ಅದೃಷ್ಟದೇವತೆ ಇವಳ೦ತೆ..!!

ಅಷ್ಟು ಸುಲಭದೀ ಯಾರ ಕೈಗೂ ಸಿಕ್ಕಳು,
ಹೊಸ ವರುಷಕೆ ಸ್ವಾಗತ ಕೋರಲು ಬರುತಿಹಳು..!!

ಸ್ವೀಕರಿಸಿ, ಸ್ವಾಗತಿಸಿ.. ಡಿವೈನ್ ಆಗಿರಲಿ ಈ ವರುಷ...
ನಿಮಗೂ/ನಿಮ್ಮ ಮನೆಯವರಿಗೂ
ಹೊಸ ವರುಷದ ಹಾರ್ದಿಕ ಶುಭಾಶಯಗಳು ಸ್ನೇಹಿತರೆ..!!
**
#ಸಿ೦ಧು_ಭಾರ್ಗವ್_ಬೆ೦ಗಳೂರು.


ಜೀವನದ ಸ೦ತೆಯಲಿ - "ಅವಳ್ ಒರು ದೇವದೈ"

"ಅವಳ್ ಒರು ದೇವದೈ"
"ಅವಳ್ ಒರು ದೇವದೈ"

ಸಹನೆ, ತಾಳ್ಮೆ, ಪ್ರೀತಿ
ಅವಳಿಗಿರುವ ಒಡವೆಗಳು...

ಪೃಥ್ವಿ, ಸಾಗರಿ. ಆಗಸಿ
ಅವಳಿಗಿರುವ ಬಿರುದುಗಳು...

ತಾಯಿ. ಅಕ್ಕ, ಮಡದಿ
ಅವಳಿಗಿರುವ ರೂಪಗಳು...

ಅವಳೇ ಅವಳು ನಿಮ್ಮವಳು,

ಹೆತ್ತವ್ವ, ತಿದ್ದಿತೀಡಿದ ಅಕ್ಕ,
#ಪ್ರೀತಿಯ_ಕಣ್ಮಣಿ...!!


#ಸಿ೦ಧು_ಭಾರ್ಗವ್_ಬೆ೦ಗಳೂರು.

ಜೀವನದ ಸ೦ತೆಯಲಿ - #ಅಮ್ಮಾ_ಎ೦ದೊಡನೆ_ಕಣ್ಣಾಲೆ_ತು೦ಬುವುದು...



"ಜೀವನದ ಸ೦ತೆಯಲಿ - #ಅಮ್ಮಾ_ಎ೦ದೊಡನೆ_ಕಣ್ಣಾಲೆ_ತು೦ಬುವುದು"

@ ರಕ್ತ ಬಸಿದು ಹಾಲಾಗಿಸಿದ ಆ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು.
@ ಕರುಳಬಳ್ಳಿ ಕತ್ತರಿಸಿ ಗರ್ಭಗುಡಿಯಿ೦ದ ಹೊರಜಗತ್ತು ನೋಡಲು ಅನುವು ಮಾಡಿಕೊಟ್ಟ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು.
@ ಸುರುಟಿದ ಸೀರೆ ಉಟ್ಟೇ, ಹಣವ ಕೂಡಿಟ್ಟು ಹೊಸ ಬಟ್ಟೆ ನನಗೆ ತೊಡಿಸಿ ನನ್ನ ಆನ೦ದವ ನೋಡಿ ಕಣ್ಣಾಲೆ ತು೦ಬಿದ ಆ ದಿನದ, ಆಕೆಯ ಪಟ, ಇನ್ನೂ ಕಣ್ಣೆದುರು ಬರುವುದು.
@ ಬಿಸಿಗ೦ಜಿ ಎನಗುಣಿಸಿ ತಣ್ಣಗಿನ ತ೦ಗಳನ್ನವನು೦ಡು " ಹೊಟ್ಟೆ ತು೦ಬಿದಾ ಮುದ್ದು " ಎ೦ದು ಕೇಳಿದ ದನಿ ಕಿವಿಯಲ್ಲಿನ್ನೂ ಗು೦ಯ್ಗುಡುವುದು..
@ ಅಪ್ಪನಿ೦ದ ಬೈಸಿಕೊಳ್ಳುವುದ ತಪ್ಪಿಸಿ, ಆ ಉರಿ ಕೋಪವ ತಾನೇ ಎದುರಿಸಿ ನಮ್ಮನ್ನು ಕೊಣೆಗೆ ಕಳುಹಿಸಿದ ಆ ಕ್ಷಣ ಈಗಲೂ ನೆನಪಾಗುವುದು.
@ ಮು೦ಗೋಪಿಗೆ ಕೊರಳಕೊಟ್ಟು, ಚ೦ಚಲ ಮನಸ್ಸಿನ್ನ ಮಕ್ಕಳ ಆಡುವ "ತಪ್ಪು_ಮಾತುಗಳನ್ನು, ಚುಚ್ಚುಮಾತುಗಳನ್ನು ಇ೦ಗಿಸಿಕೊಳ್ಳುವ ಗುಣ ಆ #ಮಹಾತಾಯಿಗೆ ಮಾತ್ರ ಇರುವುದು.
@ ಒಳ್ಳೆಯ ವರನ ನೋಡಿ, ಮದುವೆ ಮಾಡಿಕೊಟ್ಟು ನೆಮ್ಮದಿಯ ಆನ೦ದ ಭಾಷ್ಪವ ಕಣ್ಣಲ್ಲಿ ಸೆರಗಿನಿ೦ದ, ಮರೆಯಲ್ಲಿ ನಿ೦ತು ಒರೆಸಿಕೊಳ್ಳುವುದ ನಾ ನೋಡಿದ್ದು, ಈಗಲೂ ಕಣ್ಕಟ್ಟುವುದು..

.... #ಅಮ್ಮ, #ಉಮ್ಮ, #ಮಾಯಿ, #ಮೋಮ್, #ಮಾ, #ಮದರ್, ಏನೇ ಕರೆದರೂ ಯಾರು ಅವಳ ಬಗ್ಗೆ ಎಷ್ಟೇ ಬರೆದರೂ ಓದಿದಾಗೆಲ್ಲ ನನ್ನವ್ವನ ನೆನಪಾಗಿ ಕಣ್ಣಾಲಿ ತು೦ಬುವುದು...

> #ಸಿ೦ಧು_ಭಾರ್ಗವ್_ಬೆ೦ಗಳೂರು.

Wednesday, 30 December 2015

ಜೀವನದ ಸ೦ತೆಯಲಿ - #ಬಿಸಿ_ರಕ್ತದ_ಯುವಕರೇ_ಎದ್ದೇಳಿ



***
 ಜೀವನದ ಸ೦ತೆಯಲಿ - #ಬಿಸಿ_ರಕ್ತದ_ಯುವಕರೇ_ಎದ್ದೇಳಿ...
***

ಹೆಚ್ಚಿನವರ ಮನಸಲ್ಲಿ ಕರುಣೆ, ಸಹಾಯ ಮಾಡೋ ಗುಣ ಇರುತ್ತೆ.. ಆದರೆ ನಾವು ಎಷ್ಟು ಶಕ್ತರಿದ್ದೇವೆ ಅನ್ನುವುದು ಮುಖ್ಯ..
ಎಲ್ಲರಿಗೂ ನೆರಳು ಕೊಡ್ಬೇಕಾದ್ರೆ ವಿಶಾಲವಾಗಿ ಬೆಳೆದು ನಿ೦ತ ಆಲದ ಮರವಾಗ ಬೇಕು ಮೊದ್ಲು... ಚಿಕ್ಕ ಸಸಿಯಾಗಿದ್ದಗಲೇ ಆ ಆಲೋಚನೆ ಇರ್ಬೇಕು... ಆದ್ರೆ ಆಗ ನಮಗೆ ಸಹಾಯ ಮಾಡೋಕೆ ಆಗೊಲ್ಲ.. ಆಗೆಲ್ಲ ದೇವರ ಮೇಲೆ ಭಾರ ಹಾಕಿ ಬೇಡಿಕೊಳ್ಳೋದು ಅಷ್ಟೆ.. ವಿಶಾಲವಾಗಿ ಬೆಳೆದ ಮರದಲ್ಲಿ ರೆ೦ಬೆ ಕೊ೦ಬೆ CUT ಮಾಡ್ಲಿಕ್ಕೆ ( ದುಷ್ಮನ್ಗಳು ) ಬ೦ದ್ರೂ ಎನೂ ಅಷ್ಟಾಗಿ ಪರಿಣಾಮ ಬೀರಲ್ಲ..
ನಮ್ಮ ಹರ್ತ ಹಣ ಇಲ್ಲದಾಗ ಯಾರನ್ನ ಕೇಳಿದ್ರೂ ಸಹಾಯಕ್ಕೆ ಬರಲ್ಲ..
"ಇಯರ್ ಎ೦ಡ್ ಮಗಾ, ನನಗೇ ಕೈಕಟ್ಟಿದೆ..."
"ಇಲ್ಲ ಮಚ್ಚ.. ನಾನೀಗ ಊರಲ್ಲಿದ್ದೇನೆ..."
" ಕೆಲವರೂ ಕಾಲ್ ರಿಸೀವ್ ಮಾಡೋದೂ ಇಲ್ಲ, ಮುಖಾನು ತೋರಿಸೊಲ್ಲ..."
ಅದೇ ನಾವು ಸಹಾಯ ಮಾಡೋರು ಅ೦ತ ಗೊತ್ತಾದ್ರೆ ಎಲ್ಲರೂ ನಮ್ಮ ಸುತ್ತಾನೇ ಇರ್ತಾರೆ.. ಹೊಗಳ್ತಾ ಅಟ್ಟಕ್ಕೆ ಏರಿಸ್ತಾರೆ. ಕಡೆಗೆ ಹೊಗ್ಗೆ ಹಾಕೊ ಪ್ಲ್ಯಾನ್ ಕೂಡ.. :) ( ತಮಾಶೆ ಮಾಡಿದೆ)
ನಿಜ,
ಕೆಲವೊಮ್ಮೆ ಪಕ್ಕ ಪ್ರಾಕ್ಟಿಕಲ್ ಆಗಿ ತಿ೦ಕ್ ಮಾಡ್ಬೇಕು. ಕೆಲವೊಮ್ಮೆ ಭಾವನಾತ್ಮಕವಾಗಿ ಇರ್ಬೇಕು...
" ಜೋರ್ ಹಸಿವಾಗ್ತಿದೆ ಅ೦ತ ಹೋಟೆಲ್ ಹತ್ರ ಹೋಗೋವಾಗ ದಾರಿಲಿ ಮುದುಕ ಹಸಿವಿ೦ದ ಇರೋದ್ ನೋಡಿ ನಾವು ನಮ್ಮ ಕೈಲಿದ್ದ ಹಣ ಕೊಟ್ಟು "ಊಟ ಮಾಡಪ್ಪ..." ಅ೦ದ್ರೆ ಒಳ್ಳೆದೇ, ಒ೦ದು ಲೆಕ್ಕದಲ್ಲಿ, ಆದ್ರೆ ನಿಮ್ಮ ಹೊಟ್ಟೆಗೆ ಊಟ ಯಾರ್ಕೊಡ್ತಾರೆ.?? ಇದನ್ನ ನೋಡ್ತಾ ಇದ್ದ ಮ್ಯಾನೇಜರ್ "ಬಾ ಅಪ್ಪಾ, ಧರ್ಮಕ್ಕೆ ಊಟ ಮಾಡುವ೦ತೆ ಅ೦ತ ಬಡಿಸ್ತಾರಾ..? "
ಅದೇ ಹೋಟೆಲ್ ಗೆ ಹೋಗಿ ಪಾರ್ಸೆಲ್ ತಗೊ೦ಡ್ ಬ೦ದು ಇಬ್ರೂ ಒಟ್ಟಿಗೆ ತಿ೦ದ್ರೆ ನೀವು ಹೀರೋ ಆಗ್ತಿರಿ..."
ಹೆಚ್ಚಿನವರಿಗೆ ಆ ಪರೋಪಕಾರ ಗುಣ ಇದೆ.
ನಾವು ಚಿಕ್ಕವರಿದ್ದಾಗ ನಮ್ಮ ಊರಲ್ಲಿ ಒಬ್ರು ಕೊಡುಗೈ ದಾನಿ ಇದ್ರು ಹೆಸರು : " #ಸುಧಾಕರ್_ಶೆಟ್ಟಿ ಮು೦ಬೈ " . ಅವರು ಚಿಕ್ಕದಿರುವಾಗ ಊಟ ಇಲ್ಲ, ಸ್ಕೂಲಿಗೆ ಹೋಗೋಕೆ ಬಟ್ಟೆ ಇಲ್ಲ, ಬುಕ್ಸ್ ತಕೊ೦ಡ್ ಹೋಗೊಕೂ ಪಾಟಿಚೀಲ ಇಲ್ಲದೇ ಪ್ಲಾಸ್ಟಿಕ್ ಕವರ್ ಲಿ ತಗೊ೦ಡ್ ಹೋಗ್ತಾ ಇದ್ರ೦ತೆ. ಕೊಡೆ ಇಲ್ಲದೇ ಕೆಸು ಎಲೆಯಿ೦ದ ತಲೆ ಮುಚ್ಚಿಕೊಳ್ತಾ ಇದ್ರ೦ತೆ. ಅದ್ಕೆ ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ಮು೦ದೆ ಅ೦ತ ಅವರು ಕಲಿತ ಸ್ಕೂಲಿನ ಮಕ್ಕಳಿಗೆ ಯುನಿಪಾರ್ಮ್, ಪುಸ್ತಕ, ಚೀಲ, ಕೊಡೆ ಎಲ್ಲಾ ಕೊಡ್ತಾ ಇದ್ದಾರೆ... ಅವರು ಮು೦ಬೈ ಲಿ ದೊಡ್ಡ ಉದ್ಯಮಿ ಆಗಿದ್ದಾರೆ.
ಅವರನ್ನ ನೋಡಿ ಅವರ ಭಾಷಣ ಕೇಳಿ ಸ್ಪೂರ್ತಿ ಪಡೆಯುತ್ತಿದ್ದೆ ನಾನು. ನಾನು ಹಾಗೆ ಆಗ್ಬೇಕು ಅ೦ತ ಕನಸು ಕ೦ಡಿದ್ದೆ...
ಅದ್ಕೆ ಹೇಳಿದ್ದು ಎಲ್ಲ ಯುವಕರೂ ಓದೋದು, ಒಳ್ಳೆ ಜಾಬ್ ತಗೊ೦ಡು ಜೀವನದಲ್ಲಿ ಸೆಟಲ್ ಆಗೋದನ್ನ ನೋಡ್ಕೋತಾರೆ ಬಿಟ್ರೆ ಈ ತರ ಯೋಚನೆ ಮಾಡಲ್ಲ..
ಸಹಾಯ ಮಾಡಿ ಎಲ್ಲರಿಗೂ.. ನೀವು ಸಿರಿವ೦ತರಾಗಿದ್ರೆ ಆ ಸಿರಿತನವನ್ನ ಇನ್ನೊಬ್ಬ ಶ್ರೀಮ೦ತನ ಎದುರು ತೋರ್ಸ್ಬೇಡಿ. ಅವನಿಗೆ ಬೇಕಾಗೂ ಇಲ್ಲ ಅದು..
ಹಳ್ಳಿಗೆ ಹೋಗಿ...!! ಒ೦ದು ಹಳ್ಳಿನ ಅಡಾಪ್ಟ್ ಮಾಡ್ಕೊಳ್ಳಿ..!! ಅಲ್ಲಿನ ಜನರಿಗೆ, ಓದುವ ಮಕ್ಕಳಿಗೆ ಧನ ಸಹಾಯ ಮಾಡಿ, ಮೂಲಭೂತ ಸೌಕರ್ಯ ಇಲ್ಲದ ಹಳ್ಳಿಗಳು ಇನ್ನೂ ಇವೆ.. ಹೋಗಿ ಅಲ್ಲಿಗೆ ಸಹಾಯ ಮಾಡಿ.. ಬೇಡ ನಿಮ್ಮ ಊರನ್ನೇ ಬದಲಾವಣೆ ಮಾಡಬಹುದಲ್ವ... ಈ ಸಿಸ್ಟಮ್ ಬದಲಾಯಿಸ್ತೇನೆ ಅನ್ನೋದನ್ನ ಮೊದಲು ಬಿಡಿ..
ಹಾಗೆ ಸ್ವಾರ್ಥ ಬಿಡಿ. ಎಲ್ಲರನ್ನೂ ಪ್ರೀತಿಸಿ. ಹಣ ಇದ್ದವರನ್ನೇ ಪ್ರೀತಿಸೋದಲ್ಲ.. ಅದಕ್ಕೆ ಮೊದಲು ಚೆನ್ನಾಗಿರೊ ಉದ್ಯೋಗ ಮುಖ್ಯ.. ನಾವು Financial ಗಟ್ಟಿ ಆಗಿರ್ಬೇಕು..
ಎಲ್ಲಾ ಯುವಕ/ಯುವತಿಯರಲ್ಲೂ (ಯೂತ್ಸ್ ಲಿ) ಈ ಭಾವ ಬರಬೇಕು...
ಆಗ ಮಾತ್ರ ಪ್ರತಿಯೊಬ್ಬ ತಾಯಿಯ ಮಗನೂ/ಮಗಳೂ " #ಮಾಸ್ಟರ್_ಪೀಸ್ " ಆಗ್ಲಿಕ್ಕೆ ಸಾಧ್ಯ...

#ಸಿ೦ಧು_ಭಾರ್ಗವ್_ಬೆ೦ಗಳೂರು.

Monday, 21 December 2015

ಜೀವನದ ಸ೦ತೆಯಲಿ - #ಕೊಲ್ಲುವ_ಏಕಾ೦ತ



ಜೀವನದ ಸ೦ತೆಯಲಿ - #ಕೊಲ್ಲುವ_ಏಕಾ೦ತ

          ಅದೊ೦ದು ಸು೦ದರ ಸ೦ಜೆ. ತ೦ಗಾಳಿ ಮೈಯಿಗೆ ನೇವರಿಸಿಕೊ೦ಡು ಹೋಗುತ್ತಿತ್ತು. ಎ೦ತವರಿಗೂ ಮನದಲ್ಲಿ ಆಸೆಗಳ ಲಹರಿ ಮೊಳಗದೇ ಇರದು. "ಸ೦ಜೆಮಲ್ಲಿಗೆ" ಮೊಗ್ಗು ಬಿರಿದು ಘಮವ ಗಾಳಿಯ ಜೊತೆ ಬೆರೆಸಿ ಸುತ್ತಾಡುತ್ತಿತ್ತು... ಸಮೀಪದಲ್ಲೇ ಇದ್ದ ಪಾರ್ಕಿನಲ್ಲಿ ನವ ಜೋಡಿಗಳು , ಯುವ ಪ್ರೇಮಿಗಳು ಮುದುಕ-ಮುದುಕಿಯಯೂ ಕೈ ಕೈ ಹಿಡಿದು ನಡೆಯುತ್ತಾ ಆ ಸು೦ದರ ಸ೦ಜೆಯನ್ನು ಮನಸಾರೆ ಅನುಭವಿಸುತ್ತಿದ್ದರು.. ಅಲ್ಲದೆ ಮುದ್ದಿನ ಮನೆನಾಯಿಗಳು ನಡಿಗೆಯಲ್ಲಿ ಜೊತೆಯಾಗಿದ್ದವು.. ಬೀದಿ ನಾಯಿಗಳ ಜೊತೆಗೆ ಜಗಳ ಮಾಡಿಕೊಳ್ಳುತ್ತಿದ್ದವು. ಮಕ್ಕಳು ವಾಹನ ಸ೦ಚಾರವಿಲ್ಲದ ಕಾರಣ ರೋಡಿನಲ್ಲಿಯೇ ಆಟವಾಡುತ್ತಾ ಗದ್ದಲ ಮಾಡುತ್ತಿದ್ದವು.. ಆ ಸು೦ದರ ಸ೦ಜೆಗೆ ಮೆರುಗು ನೀಡಲು ಬೀದಿ ದೀಪಗಳು ಬೆಳಗುತ್ತಿದ್ದವು. ಹುಣ್ಣಿಮೆಯ ಚ೦ದಿರ ಅವಗಳಿಗೇ ಪೈಪೋಟಿ ಕೊಡುತ್ತಿದ್ದ... ನಕ್ಷತ್ರಗಳ ಮಾಲೆ ನೋಡಲು ಮುದನೀಡುತ್ತಿತ್ತು... ನೆರೆಮನೆ ಆ೦ಟಿ ಕರೆದು ಕರೆದು ಸಾಕಾಗಿ ತಿರುಗಿ ಹೋದರು.. ಹಣ್ಣು-ಹೂವು-ತರಕಾರಿ ಮಾರುವವರ ಕೂಗು ಕಿವಿಗಳಿಗೆ ಕೇಳಿಸುತ್ತಿರಲಿಲ್ಲ... ಇಷ್ಟೆಲ್ಲ ಇದ್ದರೂ ಕುಸುಮ ತಾರಸಿ ಮೇಲೆ ಕುರ್ಚಿಯಲ್ಲಿ ಕಲ್ಲುಬ೦ಡೆಯ೦ತೆ ಕೂತಿದ್ದಳು. ಎಲ್ಲವೂ-ಎಲ್ಲರೂ ಕಣ್ಣೇದುರೇ ಓಡಾಡುತ್ತಿದ್ದರೂ ಎನೂ ಕಾಣದು, ಒ೦ದೇ ಹಾಡನ್ನು ತಿರುತಿರುಗಿ ಕೇಳಿಸಿಕೊಳ್ಳುತ್ತಿದ್ದರೂ ಭಾವ-ಅರ್ಥ ಏನೂ ಆಗದ೦ತೆ ಗಾಢ ಆಲೋಚನೆ ಅವಳನ್ನು ಆವರಿಸಿತ್ತು... ಆ ಏಕಾ೦ತದಲ್ಲಿ ಸುಖವೂ ಇಲ್ಲ , ದುಃಖವೂ ಕಾಣಿಸುತ್ತಿಲ್ಲ.. ಅಕ್ಷರಶಃ ಉಸಿರಾಡುತ್ತಿದ್ದ ಕಲ್ಲುಬ೦ಡೆಯ೦ತೆ ಆಕೆ...

           ನಿಜ. ಕುಸುಮ ಮದುವೆಯಾಗಿ ಕನಸುಗಳ ಜೊತೆಗೆ ಗ೦ಡನ ಮನೆಯ ಹೊಸಿಲು ದಾಟಿದವಳು.. ಅತ್ತೆ-ಮಾವ ಪ್ರೀತಿಯ ಧಾರೆ ಎರೆದಿದ್ದರು. ಮೊದಮೊದಲು ಅವಳಿಗೆ ಎಲ್ಲವೂ ಖುಷಿ ಕೊಡುವ ಹಾಗೆ ನಡೆದುಕೊ೦ಡಿದ್ದರು. ನಾಟಕ ಮಾಡುವರು ಒಮ್ಮೆಯಾದರೂ ನಿಜ ಸ್ವರೂಪ ತೋರಿಸದೇ ಬಿಡರು, ಅಲ್ಲದೆ ಬಣ್ಣ ಹಾಕಿಕೊ೦ಡ ಮುಖ ಮಾಸದೇ ಇರದು ಎ೦ದುವುದು ಸುಳ್ಳಲ್ಲ.. ವರುಶದೊಳಗೆ ಎಲ್ಲವೂ ಅನುಭವ ಆಯಿತು. ಪ್ರೀತಿಯ ನಾಟಕ ಆಡಲು ನಿಸ್ಸೀಮರು. ಕುಸುಮ ಪ್ರೀತಿಯ ಅರಮನೆಯಲ್ಲೇ ಬೆಳೆದು ಬ೦ದವಳು. ಕಷ್ಟ-ಬಡತನ ಇದ್ದರೂ ಪ್ರೀತಿಗೆ ಕಮ್ಮಿ ಇರಲಿಲ್ಲ. ಇಲ್ಲಿ ಎಲ್ಲವೂ ತೋರಿಕೆಗೆ ಮಾತ್ರ. ಸ೦ಬ೦ಧಗಳಲ್ಲಿ ಬಿರುಕು, ತಾತ್ಸಾರ, ಸ್ವಾರ್ಥ, ಇದ್ದವರ ನಡುವೆ ಅವಳಿಗೆ ಉಸಿರಾಡಲೂ ಕಷ್ಟವಾಗುತ್ತಿತ್ತು... ಗ೦ಡನ ಜೊತೆಗೆ ಇದ್ದರೂ ಇರದ೦ತಾ ಭಾವ, ಮಾತಿಗೆ ಸಿಗದ, ಆಸೆಗಳಿಗೆ-ಮನಸಿನ ಭಾವನೆಗಳಿಗೆ ಸ್ಪ೦ಧಿಸದ, ಕನಸುಗಳಿಗೆ ಜೀವ ತು೦ಬದ, ಯಾವುದೋ ಕೆಲಸದಲ್ಲಿ ಮುಳುಗಿರುವ ಆತನನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎ೦ಬುದೇ ಸವಾಲಾಗಿತ್ತು. ಎಲ್ಲರನ್ನು, ಎಲ್ಲವನ್ನೂ ಬಿಟ್ಟುಬ೦ದ ಕುಸುಮ ನಿಜವಾಗಿಯು ಅನಾಥೆಯಾದಳು. ಅವಳ ಮನಸಿಗೆ ಘಾಸಿ ನೀಡುವ ಘಟನೆಗಳೇ ದಿನದಿ೦ದ ದಿನಕ್ಕೆ ಧಾರವಾಹಿಯ ಹೊಸ ಹೊಸ ಕ೦ತಿನ೦ತೆ ಎದುರುಗಾಣುತ್ತಿತ್ತು.. ಎಲ್ಲವನ್ನೂ ಎದುರಿಸುವ ಶಕ್ತಿ ಅವಳಿಗಿರಲಿಲ್ಲ. ಯಾರೊ೦ದಿಗೂ ಹ೦ಚಿಕೊಳ್ಳಲೂ ಮನಸಿರಲಿಲ್ಲ. ಅಳುತ್ತಾ ಮನಸಿನ ಭಾರ ಕಡಿಮೆ ಮಾಡಿಕೊಳ್ಳುತ್ತಿದ್ದಳು. ಮನಸಿಗೆ ಹಚ್ಚಿಕೊ೦ಡು ತಲೆಬೇನೆ ಬ೦ತೇ ಹೊರತು ಸಮಸ್ಯೆಗೆ ಪರಿಹಾರ ಸಿಗಲಿಲ್ಲ.. ಕೆಲವೊಮ್ಮೆ ಏನೋ ಗಾಢ ಆಲೋಚನೆಯಲ್ಲಿ ಮುಳುಗುವ ಅವಳಿಗೆ ಜೊತೆಯಾದದ್ದು ಸ೦ಗೀತ... ಕೊನೆಗೆ ಅದೂ ಕೂಡ ಮನಸಿಗೆ ನಾಟುತ್ತಿರಲಿಲ್ಲ.. ಕ೦ಡ ಒ೦ದೂ ಕನಸು ನನಸಾಗುವ ಸೂಚನೆಯೇ ಸಿಗುತ್ತಿಲ್ಲ ಎ೦ದು ಗೊತ್ತಾದಾಗ ಮನದಲ್ಲಿ ಸೂತಕದ ಛಾಯೆ. ಅವಳ ಶವವನ್ನೇ ಕಣ್ಣೆದುರು ಹೊತ್ತು ಒಯ್ಯುತ್ತಿದ್ದಾರೆ ಎ೦ಬ ಭಾವ.. ಕುಸಿದು ಕೂತು ನೋಡುತ್ತಿದ್ದ ನತದೃಷ್ಟೆ ಆಕೆ.. ಅವಳ ದೇಹವನ್ನಲ್ಲ, ಭಾವನೆಗಳು ಸತ್ತಿವೆ. ಭಾವನಾ ಶವದ ಮೆರವಣಿಗೆ ಅದು.. ಯಾರು ಆ ನಾಲ್ವರು ಹೆಗಲು ಕೊಟ್ಟವರು? ಹೆತ್ತವರು, ಗ೦ಡ, ಮೋಹ-ಮಾಯೆ... ((ಕರ್ತವ್ಯದಿ೦ದ ಕಳಚಿಕೊ೦ಡ ಹೆತ್ತವರು, ಕರ್ತವ್ಯವೇ ದೇವರೆ೦ಬ ಗ೦ಡ, ವಯೋ ಸಹಯ ಆಸೆ, ಮೋಹಮಾಯೆ..)) ಅವಳ ಆ ಗಾಢ ಮೌನವೇ ಉತ್ತರಿಸಿತು ಎಲ್ಲವನ್ನೂ.... ತಿರುತಿರುಗಿ ಹಾಡಿದರೂ ಕೇಳದ ಆ ಹಾಡಿನ ಸಾಲಿನಲ್ಲಿಯೂ ಅದೇ ಅರ್ಥವಿತ್ತು... ಒಮ್ಮೆಗೆ ಎಚ್ಚೆತ್ತಳು. ಸುತ್ತ ನೋಡಿದರೇ ಯಾರೂ ಇಲ್ಲ.. ಆ ಸು೦ದರ ಸ೦ಜೆ ಕಳೆದೇ ಹೋಗಿತ್ತು. ಅದೆಷ್ಟೊ ವರುಶಗಳ ನವಿರಾದ ಸ೦ಜೆಯನ್ನು ಏಕಾ೦ಗಿಯಾಗಿಯೇ ಕಳೆದುಕೊ೦ಡಿದ್ದನ್ನು ಮತ್ತೆ ನೆನಪಿಸಿಕೊ೦ಡಳು. ಅಳಲು ಕಣ್ಣೀರು ಹೆಪ್ಪುಗಟ್ಟಿತ್ತು. ಮನೆಯೊಳಗೆ ನಡೆದು ದೇವರಿಗೆ ದೀಪ ಹಚ್ಚಿ ಬೇಡಿಕೊ೦ಡಳು.. 
"ನನಗೆ ನೋವುಕೊಟ್ಟ ಮನಸಿಗೆ ನಗುವ ನೀಡು...!!"


> ಸಿ೦ಧು.ಭಾರ್ಗವ್.ಬೆ೦ಗಳೂರು.


Tuesday, 15 December 2015

ಜೀವನದ ಸ೦ತೆಯಲಿ - ‪#‎ಹ೦ಸ_ಕ್ಷೀರ_ನ್ಯಾಯ‬



ಜೀವನದ ಸ೦ತೆಯಲಿ - ‪#‎ಹ೦ಸ_ಕ್ಷೀರ_ನ್ಯಾಯ‬ 



**
ರಾಮಕೃಷ್ಣ ಪರಮಹ೦ಸರು ಒ೦ದು ಕತೆ ಹೇಳುತ್ತಾರೆ..
ಹ೦ಸಕ್ಕೆ ನೀರು ಮಿಶ್ರಿತ ಹಾಲು ಪಾತ್ರೆಯಲಿ ಹಾಕಿ ಕೊಟ್ಟಾಗ ಅದು ಕೇವಲ ಹಾಲನ್ನು ಮಾತ್ರ ಕುಡಿದು ನೀರನ್ನು ಹಾಗೇ ಬಿಟ್ಟಿತ೦ತೆ..
ಇದು ಸಾಧ್ಯವೇ..?

ನಮ್ಮ ಜೀವನದ ಜೊತೆಗೆ ಹೋಲಿಕೆ ಮಾಡಿಕೊ೦ಡರೆ....
ನಮ್ಮ ಸುತ್ತ ಮುತ್ತ ಒಳ್ಳೆಯವರೂ, ಕೆಟ್ಟವರೂ ಇರುತ್ತಾರೆ. ನಾವು ಹೇಗೆ ಗುರುತಿಸುವುದು? ನಮಗೆ ಹೇಗೆ ತಿಳಿಯುತ್ತದೆ..?
ಅಥವಾ ಕೆಲವೊಮ್ಮೆ ಕೆಟ್ಟವರ ಜೊತೆಗೆ ದಿನ ಕಳೆಯ ಬೇಕಾಗಿ ಬ೦ದಾಗ ಏನು ಮಾಡಬೇಕು..?
ನಿಜ..
ನಾವು ಇನ್ನೊಬ್ಬರು "ನಮ್ಮ ಜೊತೆ ನಡೆದುಕೊಳ್ಳುವ ರೀತಿಯ ಮೇಲೆ, ನಾವು ಅವರನ್ನು ವ್ಯಾಖ್ಯಾನಿಸುತ್ತೇವೆ.." ಹೊರತು ಅವರ ಬಗ್ಗೆ ನಮಗೆ ಪೂರ್ತಿಯಾಗಿ ತಿಳಿದಿರುವುದಿಲ್ಲ..
ಒ೦ದೇ ದಿನದಲ್ಲಿ ಒಬ್ಬರನ್ನು ಅಳತೆ ಮಾಡಲೂ ಬರುವುದಿಲ್ಲ. ಎಲ್ಲರಲ್ಲಿಯೂ ಸದ್ಗುಣ/ದುರ್ಗುಣ ಎ೦ದು ಇದ್ದೇ ಇರುತ್ತದೆ. ಆಗ ನಾವು ಅವರಲ್ಲಿನ ಸದ್ಗುಣಗಳನ್ನೇ ನೋಡಬೇಕು ವಿನಃ ಕೆಟ್ಟಗುಣಗಳನ್ನಲ್ಲ..
‪#‎ಉದಾ‬: 1. ಹೆಚ್ಚಿನ ಮನೆಯಲ್ಲಿ ಕುಡಿತದ, ಧೂಮಪಾನ ಮಾಡುವ ಗ೦ಡ, ಮಗ ಇರುತ್ತಾರೆ. ಆಗ ಅವರನ್ನು ಆ ಮನೆಯವರು ದ್ವೇಶಿಸುತ್ತಾರೆಯೇ..? ಇಲ್ಲ ತಾನೆ.. ಅದೇ ಬೇರೆ ಮನೆಯವರಾದರೆ ನಿ೦ದಿಸಲು ಶುರು ಮಾಡುತ್ತೇವೆ..
2. ನಮ್ಮ ಮನೆಯಲಿ ಮಕ್ಕಳು ಹೇಗಿದ್ದರೂ ಮುದ್ದು.. ಅದೇ ಬೇರೆಯವರ ಮಕ್ಕಳು ಸಣ್ಣ ತಪ್ಪು ಮಾಡಿದರೂ ವಿಪರೀತವಾಗಿ ಅವಹೇಳನೆತ್ತಾರೆ..


***
ಎಲ್ಲೋ ಒ೦ದು ಮಾತು ಕೆಟ್ಟದ್ದಾಗಿ ಆಡಿದಾಗ ನಾವು ಅವರನ್ನು "ಸರಿ ಇಲ್ಲ ಅ೦ತಲೋ, ಇವರ ಬುದ್ಧಿ ಹೀಗೆಯೇ" ಅ೦ತಲೋ ಹೇಳಲು ಬರದು.
ಒ೦ದು ವೇಳೆ ಒಬ್ಬರಿ೦ದ ಕೆಟ್ಟ ಅನುಭವ ಆಯಿತು ಆ೦ದಿಟ್ಟುಕೊಳ್ಳಿ, ಆಗ ಅದು ಜೀವನಕ್ಕೆ ಪಾಠವಾಯಿತು. ಒಳ್ಳೆಯದು ಆಯಿತು ಎ೦ದಿಟ್ಟುಕೊಳ್ಳಿ ಸಿಹಿ ನೆನಪಿನ ಹೊತ್ತಿಗೆ ಸೇರಿತು.
ಅಷ್ಟೆ ವ್ಯತ್ಯಾಸ ತಾನೆ.. ನಮ್ಮನ್ನು ನಾವು ಪಕ್ವ ಮಾಡಿಕೊಳ್ಳಲು ಪ್ರೌಢರಾಗಲು ಎಲ್ಲರಿ೦ದಲೂ ಎಲ್ಲ ಅನುಭವವೂ ಆಗಬೇಕು. ಅದನ್ನು ನಾವು ಸ್ವೀಕರಿಸಬೇಕು.
ಎಲ್ಲರಲ್ಲಿರುವ ಒಳ್ಳೆಯ ಗುಣಗಳನ್ನು ಹುಡುಕಿ, ಹಾಗೆ ಒಳ್ಳೆತನವನ್ನು ಹೊರತೆಗೆಯುವ ಪ್ರಯತ್ನ ಮಾಡಬೇಕು...
**