Tuesday 2 June 2020

ಲೇಖನ ಕರೋನಾದಿಂದ ಮದುವೆ ಮಾತ್ರ ಮುಂದೂಡಿದ್ದಲ್ಲ

ಕರೋನಾದಿಂದ ಮದುವೆ ಮುಂದೂಡಿದೆ. ಅಷ್ಟೇ ಅಲ್ಲ
Source images

Wedding groom and Bride source images


🍀 ಮದುಮಗಳ ತಂದೆ, ಮೊದಲೇ ಬುಕ್ ಮಾಡಿದ ಛತ್ರದ ಅಡ್ವಾನ್ಸ್ ವಾಪಾಸು ಕೇಳಿಯಾಯಿತು.
🍀 ಅಡುಗೆ ಭಟ್ಟರಿಗೆ, ಬಡಿಸುವವರಿಗೆ, ಶ್ಯಾಮಿಯಾನ,ಫೋಟೊ-ವೀಡಿಯೋಗ್ರಾಫರ್, ಸ್ಟೂಡಿಯೋದವರಿಗೆ, ಪುರೋಹಿತರಿಗೆ ಕರೆಮಾಡಿ ಮುಂದೂಡಿದ ವಿಷಯ ತಿಳಿಸಬೇಕಾಯಿತು.
🍀 ಛತ್ರದ ಮ್ಯಾನೇಜರ್, ವಾದ್ಯಕ್ಕೆ, ಮಂಟಪದ ಅಲಂಕಾರಕ್ಕೆ, ಕ್ಲೀನಿಂಗ್ ಗೆ , ಐಸ್ ಕ್ರೀಮ್ ಕೊಡುವವರಿಗೆ, ಇನ್ನು ಸ್ಪೆಶಲ್ ಸಿಹಿಖಾದ್ಯ ಮಾಡಿಸುವುದಾದರೆ ಅವರಿಗೂ
ಹೇಳಿದವರೆಲ್ಲರಿಗೂ ಬೇಡ ಎನ್ನಬೇಕಾಯಿತು.
🍀 ಅಂಗಡಿಯವರ ತರಕಾರಿ, ದಿನಸೀ, ಪುರೋಹಿತ ಸಾಮಗ್ರಿಗಳು ಅಲ್ಲೇ ಉಳಿಯಿತು.
🍀 ಹೂವು-ಹಣ್ಣುಗಳ ವ್ಯಾಪಾರಿಗಳಿಗೆ ಬೇಸರವಾಯಿತು.
🍀 ಮದುವೆಗೆ ಬರುವವರಿಗೆ ವಾಹನ ವ್ಯವಸ್ಥೆ ಮಾಡಲೋಸುಗ ಮುಂಗಡ ಬುಕ್ ಮಾಡಿದ ಕಾರು, ಮಿನಿ ಬಸ್ ನವರಿಗೆ ಬೇಡ ಹೇಳಬೇಕಾಯಿತು.

ಕರೋನಾದಿಂದ ಮದುವೆ ಮುಂದೂಡಲಾಗಿದೆ. ಅಷ್ಟೇ ಅಲ್ಲ,
Source image

🌳 ಸಂಬಂಧಿಕರಿಗೆ, ಸ್ನೇಹಿತರಿಗೆ ಅರ್ಧದಷ್ಟು ಹೇಳಿಕೆ‌ ಹೇಳಿದವರಿಗೆಲ್ಲ ಮತ್ತೆ ಮುಂದೂಡಲ್ಪಟ್ಟ ವಿಷಯ ತಿಳಿಸಬೇಕಾಯಿತು. ಕೆಲವರ ಫೋನ್ ನಂಬರ್ ಕೂಡ ಇಲ್ಲ. ಎಲ್ಲೋ ಬೇರೆಯವರ ಫಂಕ್ಷನ್ ಗೆ ಬಂದಾಗ ನಮ್ಮ ಮಗಳ‌ ಮದುವೆಗೂ ಬನ್ನಿ ಎಂದು ಕಾಗದ ಹಂಚಿದ್ದು.
🌳 ಮನೆಯ ಸುತ್ತ ಮುತ್ತ ಕ್ಲೀನ್ ಮಾಡಿಸಿ ಮನೆಯ ಗೋಡೆಗೆಲ್ಲ ಬಣ್ಣ ಬಳಿಯುವ  ಯೋಜನೆಯಲ್ಲಿ ಇದ್ದಾಗಲೇ ಹೀಗಾದ ಕಾರಣ ಅವರಿಗೂ ಕೆಲಸ / ಸಂಬಳ ತಪ್ಪಿತು.
🌳 ಬಟ್ಟೆ ಮಳಿಗೆಯಲ್ಲಿನ ಪಟ್ಟೆ ಸೀರೆ, ವೇಷ್ಟೀ ಶಾಲುಗಳು ಹಾಗೆಯೇ ಉಳಿದವು.
🌳 ಬಳೆಯಂಗಡಿ, ಹೊಲಿಗೆಯವರು ಮನೆಯಲ್ಲೆ ಖಾಲಿ ಕುಳಿತರು. ಮೇಕಪ್ ಮಾಡಿಸುವವರಿಗೆ ಕೆಲಸವಿಲ್ಲ. ಮೆಹಂದಿ ಹಚ್ಚಿ ಸೀಸನ್ ಲಿ ಸಾವಿರ ಸಾವಿರ ಹಣ ಮಾಡುತ್ತಿದ್ದವರಿಗೆ ಕೆಲಸವಿಲ್ಲ. ಡಿ.ಜೆ ಗದ್ದಲವಿಲ್ಲ. ವೈನ್, ಮದ್ಯ, ಮೆಹಂದಿ ಹಿಂದಿನ ರಾತ್ರಿಯ ಬಾಡೂಟ ಚಪ್ಪರಿಸುವ ಹಾಗಿಲ್ಲ.

ಕರೋನಾದಿಂದ ಮದುವೆ ಮುಂದೂಡಲಾಗಿದೆ, ಅಷ್ಟೇ ಅಲ್ಲ
Corona virus source image

Source image

🌲 ಮದುಮಕ್ಕಳ, ಮನೆಯವರ, ಹೆತ್ತವರ ಸಂಭ್ರಮಕ್ಕೆ ಅವಕಾಶವಿಲ್ಲ. ನಾವು ಯಾರಿಗೂ ಕಮ್ಮಿ ಇಲ್ಲ, ವರನ ಮನೆಯವರ ಎದುರು ನಾವು ಸಣ್ಣವರಾಗ ಬಾರದು ಎಂದು ಕೆಲವರು ದುಂದುವೆಚ್ಚ ಮಾಡುತ್ತಿದ್ದರು. ಅದಕ್ಕಾಗಿಯೇ ಲಕ್ಷಲಕ್ಷ ತೆಗೆದಿಡುತ್ತಿದ್ದರು. ಆ ಹಮ್ಮಿಗೆ ಈಗ ಜಾಗವಿಲ್ಲ.
🌲 ಎಪ್ರಿಲ್ ಮೇ ಸೀಸನ್ನಿನಲ್ಲಿ  ದುಡಿದು ಒಂದಷ್ಟು ಹಣ ಒಟ್ಟು ಮಾಡುವ ಪ್ರತಿಯೊಬ್ಬರ ವೃತ್ತಿ ಜೀವನಕ್ಕೆ ಬ್ರೇಕ್ ಬಿದ್ದಿದೆ.
🌲 ಕೈಯಲ್ಲಿ ಕಾಸಿಲ್ಲದೇ, ಕೂಡಿಟ್ಟ ಹಣವೆಲ್ಲ ಖಾಲಿಯಾಗುತ್ತ ಬಂದಿದೆ.
🌲 ಹಳ್ಳಿ ಜೀವನವಾದರೆ ತಮ್ಮ ಮನೆಯಲ್ಲೆಯೇ ಕೈತೋಟ ಮಾಡಿಕೊಂಡು ದಿನದ ಊಟಕ್ಕೆ ತರಕಾರಿ, ಹಣ್ಣು, ಸೊಪ್ಪುಗಳು, ತೆಂಗಿನಕಾಯಿ ಬೆಳೆಸಿಕೊಂಡು ಬದುಕಬಹುದು.
🌲 ಉಳಿದವರಿಗೆ?? ಎಲ್ಲವನ್ನೂ ಹಣ ನೀಡಿಯೇ ಖರೀದಿಸಬೇಕು ಎನ್ನುವವರಿಗೆ ತುಂಬಾ ಕಷ್ಟವಾಗುತ್ತದೆ.
🌲 ಕರೋನಾ ಮಾರಿ ಇಂದು ನಾಳೆಗೆ ಮುಗಿಯುವ ಲಕ್ಷಣವಿಲ್ಲ. ಇದರೊಂದಿಗೆ ಬದುಕಬೇಕು ಎಂದು‌ ಮನದಲ್ಲಿ ಧೃಡಸಂಕಲ್ಪ ಮಾಡಿಕೊಂಡು ನಮ್ಮ ಎಚ್ಚರಿಕೆಯಲ್ಲಿ ನಾವಿದ್ದು ಮತ್ತೆ ಜೀವನ ಕಟ್ಟಿಕೊಳ್ಳಬೇಕು.

ಲೇಖನ :- ಸಿಂಧು ಭಾರ್ಗವ್ ಬೆಂಗಳೂರು

No comments:

Post a Comment