Father's day special edition @Vijaykarnataka |
Vijaykarnataka my article |
Family photo |
ಒಂದು ಈರುಳ್ಳಿಯನ್ನೇ ತೆಗೆದುಕೊಳ್ಳಿ. ತಾನು ಮಣ್ಣಿನಲ್ಲಿ ಬೇರೂರಿ, ಕೊಳೆತು ಗೊಬ್ಬರವಾಗಿ ಮೊಳಕೆಯೊಡೆಯಲು ಸಹಾಯಮಾಡುತ್ತದೆ. ಅಪ್ಪನೂ ಹಾಗೆಯೇ. ಅಪ್ಪ, ಮಕ್ಕಳ ಏಳಿಗೆಗೆ ಬಸವಳಿದು ,ಸವೆದು ಶ್ರಮಿಸುವವನು. ರಕ್ಷಾಕವಚದಂತೆ ತನ್ನ ಮಕ್ಕಳನ್ನು ರಕ್ಷಿಸುವನು. ನಮ್ಮ ತಂದೆ "ಹೇಗೆ ಬದುಕಬೇಕು ಎಂದು ಕಲಿಸಿಕೊಡಲಿಲ್ಲ. ಬದಲಾಗಿ ಬದುಕಿ ತೋರಿಸಿದರು". ಅವರಲ್ಲಿ ಸ್ನೇಹ ,ಪ್ರೀತಿ ,ವಿಶ್ವಾಸ, ಸಹಾಯಹಸ್ತ, ತಮಾಷೆ ಮಾಡುವ ಗುಣ ಎಲ್ಲವೂ ಇದೆ. ಹುರಿಮೀಸೆಯಡಿಯಲ್ಲಿನ ಕೋಪದಲ್ಲಿ ಒಂದು ಕಾಳಜಿಯು ಇದೆ. ಅದನ್ನು ಅಮ್ಮ ಕಂಡುಕೊಂಡಿದ್ದಳು. ನಾವು ಮೂವರು ಹೆಣ್ಮಕ್ಕಳು. ಸಣ್ಣವರಿದ್ದಾಗ ಇನ್ನೂ ನೆನಪಿದೆ, ಆಗ ನನಗೆ ಹದಿಮೂರು ವರ್ಷ ವಯಸ್ಸು. ತಿಂಗಳ ಋತುಚಕ್ರ ಶುರುವಾದಾಗ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುವುದು. ಆಗೆಲ್ಲ ನಮ್ಮ ತಂದೆ " ಶಾಲೆಯ ಹೋಮ್ ವರ್ಕ್ ಏನೂ ಮಾಡೋದು ಬೇಡ. ಬೇಗ ಊಟ ಮಾಡಿ ಮಲ್ಕೋ. ಎಷ್ಟು ಹೊಟ್ಟೆ ನೋಯ್ತಾ ಇದೆಯೋ ಏನೋ... ಏಯ್.. ವಸಂತೀ...ಅವಳಿಗೆ ಬೇಗ ಊಟ ಹಾಕು. ಪಾಪ!! ಮಲಗಲಿ. ಎಂದು ಸಂಜೆಯ ವೇಳೆಗೆ ಹೇಳುತ್ತಿದ್ದರು. ತಾಯಿಯ ಅಂತಃಕರಣ ಅವರಲ್ಲಿದೆ. ಇದೊಂದು ಉದಾಹರಣೆ ಅಷ್ಟೇ. ಇನ್ನೂ ಅನೇಕ ರೀತಿಯಲ್ಲಿ ಅಪ್ಪ ನನಗೆ ಇಷ್ಟವಾಗುತ್ತಾರೆ. ಕೃಷಿ, ಹೈನುಗಾರಿಕೆ, ಓದುವುದು, ಸಂಗೀತ, ಯಕ್ಷಗಾನ ಹಾಡುಗಾರಿಕೆ ಎಲ್ಲವೂ ಅವರ ಆಸಕ್ತಿ ವಿಷಯಗಳು. ಅಪ್ಪಂದಿರ ದಿನದ ಶುಭಾಶಯಗಳು💐. ಅಪ್ಪ ಐ ಲವ್ ಯೂ ಅಪ್ಪ...
ಪ್ರೀತಿಯ ಮಗಳು,
ರಾಧಿಕಾ
No comments:
Post a Comment