#google_image
#ಹಕ್ಕಿಬಿತ್ತಿದಕಾಳು_ಕಥೆಕವನಗಳಸಂಕಲನ
ಭಾವಗೀತೆ : ಮುರಳಿಯ_ಗಾನ
ತಿಳಿಸಂಜೆ ವೇಳೆಯಲಿ, ಹೂಬನದ ಹಾದಿಯಲಿ
ಮುರಳಿಯ ಗಾನವು ಕೇಳುತ್ತಿತ್ತು...
ರಾಧಾ ಮಾಧವರು ಏಕಾಂತದಲ್ಲಿರಲು
ಕೋಕಿಲದ ದನಿಯು ಜೊತೆಯಾಗಿತ್ತು
ಹಸಿರು ಹಾಸಿನ ಮೇಲೆ ಹರಿಣಗಳ ಜಿಗಿದಾಟ
ಮನಸಿಗೇನೋ ಮುದವಾಗಿತ್ತು
ಅಲ್ಲೊಂದು ಇಲ್ಲೊಂದು ಇಣಚಿಗಳ ಕುಣಿದಾಟ
ನಯನಗಳಿಗೆ ಮೆದುವಾಗಿತ್ತು
ತಂಗಾಳಿ ಮೈಸೋಕಿ ರೋಮಾಂಚನ ವಾಗಲು
ರಾಧೆಯ ಮೊಗದಲ್ಲಿ ನಗುಮೂಡಿತ್ತು
ಪಿಸುನುಡಿಯ ನುಡಿಯಲು ಮಾಧವನ ಕಿವಿಯಲ್ಲಿ
ಆನಂದದ ಅಲೆಯೇ ತುಳುಕಾಡಿತು
ಜಿಟಿಜಿಟಿ ಮಳೆಹನಿ ಸುರಿದಾಗ ಮಾಧವನು
ರಾಧೆಯ ಮರದಡಿಗೆ ಬರಸೆಳೆದನು
ಸೆರಗಿನ ಮರೆಯಲ್ಲಿ ರಾಧೆಯ ಜೊತೆಗೂಡಿ
ಶೃಂಗಾರ ಕಾವ್ಯವನು ಬರೆದಿಹನು
ಗೋಪಾಲನಾಗಿ ಲೋಕವನೇ ನಡೆಸುವ
ಮುರಳೀಲೋಲನ ಲೀಲೆಯಿದು
ಅಮರ ಪ್ರೇಮಕೆ ಪ್ರಕೃತಿಯನ್ನೇ
ಸಾಕ್ಷಿಯನ್ನಾಗಿಸಿದ ಗಳಿಗೆಯಿದು
ರಚನೆ : ಸಿಂಧು ಭಾರ್ಗವ್ | ಬೆಂಗಳೂರು
#sindhubhargavquotes #kannadapoem #yqjogi_kannada kannadabarahagalu #ರಾಧಾಕೃಷ್ಣ ರಾಧೆ ರಾಧೆ ಮುರಳೀಲೋಲ
#ಹಕ್ಕಿಬಿತ್ತಿದಕಾಳು_ಕಥೆಕವನಗಳಸಂಕಲನ
ಭಾವಗೀತೆ : ಮುರಳಿಯ_ಗಾನ
ತಿಳಿಸಂಜೆ ವೇಳೆಯಲಿ, ಹೂಬನದ ಹಾದಿಯಲಿ
ಮುರಳಿಯ ಗಾನವು ಕೇಳುತ್ತಿತ್ತು...
ರಾಧಾ ಮಾಧವರು ಏಕಾಂತದಲ್ಲಿರಲು
ಕೋಕಿಲದ ದನಿಯು ಜೊತೆಯಾಗಿತ್ತು
ಹಸಿರು ಹಾಸಿನ ಮೇಲೆ ಹರಿಣಗಳ ಜಿಗಿದಾಟ
ಮನಸಿಗೇನೋ ಮುದವಾಗಿತ್ತು
ಅಲ್ಲೊಂದು ಇಲ್ಲೊಂದು ಇಣಚಿಗಳ ಕುಣಿದಾಟ
ನಯನಗಳಿಗೆ ಮೆದುವಾಗಿತ್ತು
ತಂಗಾಳಿ ಮೈಸೋಕಿ ರೋಮಾಂಚನ ವಾಗಲು
ರಾಧೆಯ ಮೊಗದಲ್ಲಿ ನಗುಮೂಡಿತ್ತು
ಪಿಸುನುಡಿಯ ನುಡಿಯಲು ಮಾಧವನ ಕಿವಿಯಲ್ಲಿ
ಆನಂದದ ಅಲೆಯೇ ತುಳುಕಾಡಿತು
ಜಿಟಿಜಿಟಿ ಮಳೆಹನಿ ಸುರಿದಾಗ ಮಾಧವನು
ರಾಧೆಯ ಮರದಡಿಗೆ ಬರಸೆಳೆದನು
ಸೆರಗಿನ ಮರೆಯಲ್ಲಿ ರಾಧೆಯ ಜೊತೆಗೂಡಿ
ಶೃಂಗಾರ ಕಾವ್ಯವನು ಬರೆದಿಹನು
ಗೋಪಾಲನಾಗಿ ಲೋಕವನೇ ನಡೆಸುವ
ಮುರಳೀಲೋಲನ ಲೀಲೆಯಿದು
ಅಮರ ಪ್ರೇಮಕೆ ಪ್ರಕೃತಿಯನ್ನೇ
ಸಾಕ್ಷಿಯನ್ನಾಗಿಸಿದ ಗಳಿಗೆಯಿದು
ರಚನೆ : ಸಿಂಧು ಭಾರ್ಗವ್ | ಬೆಂಗಳೂರು
#sindhubhargavquotes #kannadapoem #yqjogi_kannada kannadabarahagalu #ರಾಧಾಕೃಷ್ಣ ರಾಧೆ ರಾಧೆ ಮುರಳೀಲೋಲ
No comments:
Post a Comment