Tuesday 12 January 2016

ಜೀವನದ ಸ೦ತೆಯಲಿ - #ಕಾಡುವ_ವೃದ್ಧಾಪ್ಯ


 
ಜೀವನದ ಸ೦ತೆಯಲಿ - #ಕಾಡುವ_ವೃದ್ಧಾಪ್ಯ

         ಅಬ್ಬಾ..!! ಈ ಮುಪ್ಪು ಬರುವುದರೊಳಗೆ ಸುರುಗಿಹೂವ ಮಾಲೆ ಕೊರಳಿಗೆ ಬೀಳಬೇಕು..
ಅನ್ನುವ ಹಾಗೆ ಯಾಕೆ ಮಾಡುತ್ತಾರೆ ಮಕ್ಕಳು.. ನಮ್ಮನ್ನು ಸಾಕಿ ಸಲಹಿ, ತಿದ್ದಿ-ತೀಡಿದ ಹೆತ್ತವರನ್ನು , ಅವರ ಮುಪ್ಪಿನ ಕಾಲದಲ್ಲಿ ಹೊರಹಾಕುವುದೋ, ಶೋಚನೀಯ ಸ್ಥಿತಿಗೆ ತಲುಪುವ೦ತೆ ಮಾಡುವುದೊ ಯಾಕಾಗಿ.. ?? ಮಾಡುವುದು ಯಾಕಾಗಿ.. ?? ಅವರನ್ನು #ವಯಸ್ಸಾಗಿದೆ ಎ೦ಬ ಕೊರಗು ಕಾಡದ೦ತೆ ಪ್ರೀತಿ-ಕಾಳಜಿ ನೀಡಿ ಮಕ್ಕಳ೦ತೆ ನೋಡಿಕೊಳ್ಳಿ..
ತಲೆಗೆ ಹಾಕಿದ ನೀರು ಕಾಲಿಗೆ ಬರಲೇ ಬೇಕು ( ಹಳ್ಳಿ ಗಾದೆಮಾತು) ಎ೦ಬ೦ತೆ ನಾಳೆ ಎನ್ನುವುದು ಒ೦ದು ಇದೆಯಲ್ಲ ಎ೦ಬ ಭಯವೂ/ ಇಲ್ಲ ಸಹಜ ತಿಳುವಳಿಕೆಯೋ ಇದ್ದಿದ್ದರೇ ಮಕ್ಕಳಾದವರು ಹಾಗೆ ನಡೆದುಕೊಳ್ಳುವುದಿಲ್ಲ..
*
                   ಕಣ್ಣ೦ಚಿನಲೇ ಮಡದಿ ಕರೆದರೆ ಓಡೋಡಿ ಕೋಣೆ ಸೇರಿಕೊಳ್ಳುವ ಮಗ, ನಾನು ಕರೆದಾಗೆಲ್ಲ ಯಾವುದೋ ಕೆಲಸದಲ್ಲಿ ತಲ್ಲೀನನಾದವನ೦ತೆ ಮಾಡುವನು.
ಮೊಮ್ಮಕ್ಕಳ ಹರುಕು-ಮುರುಕು ಆ೦ಗ್ಲಭಾಷೆ ನನಗೆ ಅರ್ಥವೇ ಆಗದು ಎ೦ದು ಅಣಕಿಸುವರು. ಸುರುಟಿದ ಅ೦ಗಿಯನು ಹಾಕಿದರೂ ನೋಡದ ಮಗ, ಊಟ, ನಿದಿರೆ ಸರಿಯಾಗಿ ಮಾಡುತ್ತಿರುವೆರೇ..? ಎ೦ದೂ ಕೇಳದ ಸೊಸೆ.. ಊರುಗೋಲು-ಮಾತ್ರೆಗಳೇ ಸ್ನೇಹಿತರು ನನಗೀಗ, ಪ್ರೀತಿಯ ಶ್ರೀಮತಿ ಬಹಳ ಬೇಗನೆ ನನ್ನ ಜೊತೆ ಜೀವನದ ಹೆಜ್ಜೆ ಹಾಕುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ. ಅವಳ ಕಣ್ಣಿನಲಿ ಜಿನುಗುತ್ತಿದ್ದ ಆ ಪ್ರೀತಿ ತಾಯಿಯ ರೂಪವೇನೋ ಎ೦ಬ೦ತೆ ಮಗುವಾಗಿ ಹ೦ಚ್ಚಿಕೊ೦ಡಿದ್ದೆ... ಈಗೆಲ್ಲಿ ?? ಅಮ್ಮನೂ ಇಲ್ಲ ಮಡದಿಯೂ.. ಅವಳು ನನ್ನಲ್ಲಿ ಏನೂ ಕೇಳಿರಲಿಲ್ಲ ನಿಷ್ಕಲ್ಮಶ ಪ್ರೀತಿ ಬಿಟ್ಟರೆ.. ನಾ ದಣಿದು ಬ೦ದಾಗ ನೀರು ಕೊಟ್ಟು ದಿನಚರಿ ಕೇಳುತ್ತಿದ್ದಳು... ಅಲ್ಲಿ -ಇಲ್ಲಿ ನಡೆದ ಕತೆಯನ್ನೆಲ್ಲಾ ಅವಳ ತೊಡೆಯ ಮೇಲೆ ಮಗುವಾಗಿ ಮಲಗಿ ಹೇಳಿದಾಗ ತಮಾಷೆ ಮಾಡುತ್ತಲೇ ತಾಳ್ಮೆಯಿ೦ದ ಕೇಳುತ್ತಿದ್ದಳು.. ಆಗ ನಾನೇ ರಾಜ ಎ೦ಬ೦ತೆ ಬೀಗುತ್ತಿದ್ದೆ.. ಸ್ವಲ್ಪವೂ ಬೇಜಾರಿರಲಿಲ್ಲ ಆಕೆಗೆ... ನಮ್ಮ ಯವ್ವನದ ಕ್ಷಣಗಳನ್ನು ಎಣಿಸಿದರೆ ವಾ..!! ಪ್ರೇಮಿಗಳ೦ತೆ ಇದ್ದಿದ್ದೆವು.. ಸ್ನೇಹಿತೆಯ೦ತೆ ನನಗೆ ಸಲಹೆ ಸೂಚನೆ ನೀಡಿ ಒ೦ದು ಉತ್ತಮ ವ್ಯಕ್ತಿಯಾಗಿ ರೂಪಿಸಿದ್ದ ಎರಡನೇ ತಾಯಿ ಆಕೆ.. ಆದರೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ.
ಸುರುಗಿಹೂವನು ಕೊರಳಲಿ ಹಾಕಿಕೊ೦ಡು ನಗುತ್ತಲೇ ಪಟ ಸೇರಿದ್ದಾಳೆ. ಅದರ ಘಮವೇ ಎಲ್ಲವನೂ ನೆನಪಿಸುತ್ತಿದೆ..
           ಕೊರೆಯುವ ಚಳಿಗೆ ಸುಕ್ಕುಗಟ್ಟಿದ ಚರುಮ, ಸಹಿಸಲಾಗದ ಸೆಕೆಗೆ ಸುಟ್ಟುಹೋಗುವ ಚರ್ಮ, ಮಳೆಗಾಲದ ವಿಪರೀತ ವ್ಯತ್ಯಯ ಆರೋಗ್ಯದಲ್ಲಿ ...
ಎಲ್ಲರೂ ಅವರವರ ಕೆಲಸದಲ್ಲಿ ಮುಳುಗಿದ್ದಾರೆ. ಮಬ್ಬಾಗಿದೆ ನನ್ನ ಕಣ್ಣಿಗೆ.. ಕನ್ನಡಕ ಸರಿ ಮಾಡಿ ಕೊಡಲು ಮಗ ಬರುತ್ತಿಲ್ಲ... ಮೊಮ್ಮಗನ ಜೊತೆ ಆಡಲು ನನಗೆ ಮನಸಿದ್ದರೂ ಸೊಸೆ ಬಿಡುತ್ತಿಲ್ಲ... ಮೊಮ್ಮಗನಿಗೆ ಓದಲಿಕ್ಕಿದೆ ಎ೦ದು ಒಳ ಕರೆದುಕೊ೦ಡು ಹೋಗುವಳು... ಅದೆ೦ತದೋ ವಿಚಿತ್ರ ಭಾವ ಅವಳಿಗೆ ನನ್ನ ಮೇಲೆ. ನಾನೆಲ್ಲಿ ಮೊಮ್ಮಗನ ತಲೆ ಕೆಡಿಸುತ್ತೇನೊ ಎ೦ದೊ ಅಥವಾ ನಮ್ಮ ಕಾಲ ಈಗ ನಡೆಯುತ್ತಿಲ್ಲವೆ೦ದೋ ತಿಳಿಯುತ್ತಿಲ್ಲ... "ಹಳೆ ಮರ-ಹೊಸ ಚಿಗುರು".. ಎನ್ನುವುದು ಆಕೆಗೆ ತಿಳಿದಿಲ್ಲ.. ನಮ್ಮ ಬೇರು ಗಟ್ಟಿಯಾಗಿ ನೆಲೆಯೂರಿದ್ದರಿ೦ದ ತಾನೆ ಅವರೆಲ್ಲ ನಗುತ್ತಿರುವುದು.. ಚಿಗುರುತ್ತಿವುದು.... ಇರಲಿ. ಎಲ್ಲವನೂ ಸಹಿಸಿಕೊಳ್ಳದೇ ಬೆರೆ ವಿಧಿ ಇಲ್ಲ. ಎಲ್ಲವೂ ಚೆನ್ನಾಗೇ ನಡಿಯುತ್ತಿದೆ ತಾನೆ, ಅವರಿಗೆ ಈಗ ನಮ್ಮ ಸಲಹೆ ಬೇಕಾಗಿಲ್ಲ.. ಎಲ್ಲರೂ ಬುದ್ಧಿವ೦ತರು-ವಿದ್ಯಾವ೦ತರು ತಾನೆ..
       ಅಬ್ಬಾ..!! "ಈ ಮುಪ್ಪು ಬರುವುದರೊಳಗೆ ಸುರುಗಿಹೂವ ಮಾಲೆ ಕೊರಳಿಗೆ ಬೀಳಬಾರದೇ.."



> #ಸಿ೦ಧು_ಭಾರ್ಗವ್_ಬೆ೦ಗಳೂರು..

No comments:

Post a Comment