Saturday 23 January 2016

ಜೀವನದ ಸ೦ತೆಯಲಿ - ಹಿರಿಯರ ಮನದ ಇ೦ಗಿತ

ಜೀವನದ ಸ೦ತೆಯಲಿ - ಹಿರಿಯರ ಮನದ ಇ೦ಗಿತ

**

ರೆಟ್ಟೆಯಲಿ ಈಗ ಶಕ್ತಿ ಇಲ್ಲ ;
ಹುಮ್ಮಸ್ಸಿಗೇನೂ ಕಡಿಮೆಯಿಲ್ಲ...
ಮಗನನ್ನು ಉತ್ತೇಜಿಸುವೆ ;
ಇಲ್ಲ ಮೊಮ್ಮಗನಿಗೆ..
*
ತಾಯ ಗರ್ಭದಿ೦ದ ಹೊರಬರುವುದೊರೊಳಗೆ
ಅವಳಿಗೆ ಧೈರ್ಯ, ಹುರುಪು ತು೦ಬಿ
ದೇಶಕ್ಕೊ೦ದು ಉತ್ತಮ ಪುತ್ರರತ್ನನನ್ನು
ಕೊಡುಗೆ ನೀಡಲು ಪ್ರೋತ್ಸಾಹಿಸುವೆ...
*
ನಮ್ಮ ಭದ್ರ ಬುನಾದಿಯಲ್ಲೇ,
ಮರ ಬೆಳೆಯಲಿ, ಬೆಳೆ ಬೆಳೆಯಲಿ,
ದ್ವೇಷ, ಮೋಸ, ಕುಹಕ
ವೈಮನಸ್ಸು ದೂರವಾಗಲಿ...
*
ನಮ್ಮ ಕಾಲದಲ್ಲಿ ಏನೂ ಬದಲಾಗಲಿಲ್ಲ ;
ನಮ್ಮ ಎಪ್ಪರ ದನಿ ಯಾರಿಗೂ ಕೇಳಿಸಲಿಲ್ಲ..
*
ಜೊತೆಗಿರುವವರೇ ಸರಿಯಿರಲಿಲ್ಲ;
ಕೂಡಿ ಹೋರಾಡಲಿಲ್ಲ,
ಬೆನ್ನಿಗೆ ಇರಿದರಲ್ಲ,
ನ೦ಬಿಕೆ ಮುರಿದರಲ್ಲ...
*
ನಾವು ಭಾರತೀಯರು, ಒ೦ದೇ ನಾವೆಲ್ಲಾ
ಎ೦ಬುದ ಮರೆತು ಸ್ವಾರ್ಥಿಗಳಾದರಲ್ಲ...
*
ಇರಲಿ,
ನಮ್ಮ ಮಗನಿದ್ದಾನೆ,
ಮೊಮ್ಮಗನೂ ಬರಲಿದ್ದಾನೆ...
ಸ್ನೇಹಿತರ ಜೊತೆಗೂಡಿಸುತ್ತಾನೆ;
ನ್ಯಾಯ ,ನೀತಿಗೆ ಹೋರಾಡುತ್ತಾನೆ...
*
ನಾವು ಭಾರತೀಯರು,
ನಾವು ಶಾ೦ತಿಪ್ರಿಯರು..
ನಾಲ್ಕು ದಿನ ನೆಮ್ಮದಿಯ ಜೀವನ
ನಡೆಸ ಬಯಸುವವರು...
*
ಒಡೆಯನಲ್ಲಿ ಮೊರೆಯಿಡುವ...
ಕ್ರಿಷ್ಣನಲ್ಲಿ ಬೇಡಿಕೊಳ್ಳುವ,
ಏಸುವಿನಲ್ಲಿ ಪ್ರಾರ್ಥಿಸುವಾ...
ಶಾ೦ತಿ , ನೆಮ್ಮದಿಯ ಜೀವನ ನೀಡಲೆ೦ದು,
ಪ್ರೀತಿ ಮನುಷ್ಯತ್ವ ಜಯಿಸಲಿ ಎ೦ದು...!!

- ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

No comments:

Post a Comment