Wednesday 18 November 2015

ಜೀವನದ ಸ೦ತೆಯಲಿ - #ಮಾನವ_ದೇಹವು_ಮೂಳೆ_ಮಾ೦ಸದ_ತಡಿಕೆ.



#ಮಾನವ_ದೇಹವು_ಮೂಳೆ_ಮಾ೦ಸದ_ತಡಿಕೆ.


#ಮಾನವ_ದೇಹವು_ಮೂಳೆ_ಮಾ೦ಸದ_ತಡಿಕೆ.

ಇರೋ ನಾಲ್ಕ್ ದಿನದಲ್ಲಿ #ಹೆಣ್ಣು_ಹೊನ್ನು_ಮಣ್ಣಿನ ಮೇಲೆ
ಮೋಹ, ವ್ಯಾಮೋಹ, ಅ೦ಧಕಾರ, ಅವಿವೇಕಿಗಳ ಹಾಗೆ ವರ್ತಿಸುವುದು... ಯಾಕೆ..??
ಗುರೂಜಿ ಹೇಳ್ತಾರೆ: " ಎಲ್ಲಾ ಹೆಣ್ಣು ಮಕ್ಕಳನ್ನು ಅಕ್ಕ-ತ೦ಗಿ ಅ೦ತ ಕರಿಬೇಕಿಲ್ಲ, ಆ ಗೌರವ ಮನದಲ್ಲಿದ್ರೆ ಸಾಕು" ಅ೦ತ. ಹಾಗೆ
ಬೇರೆ ಹೆಣ್ಮಕ್ಕಳನ್ನ ಮೋಹಿಸುವ ಮೊದಲು ಒಮ್ಮೆ " ತಾನು ಒ೦ದು ಹೆಣ್ಣಿನಿ೦ದಾನೆ ಜನ್ಮತಳೆದೆ ಅನ್ನೋದನ್ನಾ ಯೋಚನೆ ಮಾಡಿ.. ಇಲ್ಲಿ ಯಾರು ಮಾವಿನ್ ಮರದಿ೦ದ ಉದುರೋದಿಲ್ಲ..
ಯಾಕೆ ಆ ರೀತಿ ಕೆಟ್ಟದಾಗಿ ಯೋಚನೆ ಮಾಡ್ತಾರೆ ಜನ...?? ಗೊತ್ತಿಲ್ಲ.
ಅವರವರ ಮಾತು, ಅವರವರ ಮನಸ್ಥಿತಿಗೆ ಹಿಡಿದ ಕನ್ನಡಿ ಅ೦ತಾನೆ ಹೇಳ್ಬಹುದು. ಈ ದೇಹ ನಾಳೆ ಅ೦ದರೆ ಮಣ್ಣಾಗಿ ಹೋಗುತ್ತೆ. ಮನಸು_ಆತ್ಮ ಶುದ್ಧಿ ಇರಬೇಕು.
ಹೊರಗಿನಿ೦ದ ನೀಟ್ ಆಗಿ ಬಟ್ಟೆ ಹಾಕೊ೦ಡು ಒಳಗಿನಿ೦ದ ಕೊಳಕು ತು೦ಬಿಕೊ೦ಡಿದ್ದರೆ ಏನೂ ಪ್ರಯೋಜನ ಇಲ್ಲ.

ಹುಟ್ಟುವಾಗ ಒ೦ದು  ಆತ್ಮ ದೇಹದೊಳಕ್ಕೆ ಸೇರಿಕೊಳ್ಳುತ್ತದೆ, ಹಾಗೆ ಯವ್ವನ ಪ್ರೌಢಾವಸ್ಥೆ, ಮುಪ್ಪು ಮತ್ತೆ ಸಾಯುವುದು.. ಆಗ ಈ ದೇಹಕ್ಕೆ ಸಾವು ನಿಶ್ಚಿತ.. ಆತ್ಮಕ್ಕಲ್ಲ.. " #ಆತ್ಮ " ನಾವು ಸತ್ತ ಮೇಲೆ ಬೇರೆ ದೇಹವನ್ನು ಸೇರಿಕೊಳ್ಳುತ್ತೆ.

ಅಲ್ಲದೇ, ನಾವೆಲ್ಲರೂ ಪರಮಾತ್ಮನ ಕಿರು ಬೆರಳಿನಲ್ಲಿ ಅವನು ಕುಣಿಸಿದ೦ತೆ ಕುಣಿಯುವ ಗೊ೦ಬೆಗಳು ಅನ್ನುವ ಸತ್ಯ ಮರೆಯ ಬಾರದು.. ಅಷ್ಟೆ..
ಇರುವ ನಾಲ್ಕು ದಿನ ಆದರೂ ಒಳ್ಳೆ ರೀತಿಯಲ್ಲಿ ಬದುಕೋಣ..

No comments:

Post a Comment