Source Pic : GoogleImg
ಮನ ,
ಸದ್ದಿಲ್ಲದೇ
ಸುದ್ದಿಗೊಡದೇ
ಮನೆಯಿ೦ದ ಹೊರಹೋಗ
ಬಯಸಿತ್ತು..
.
ಕಿರುಬೆರಳ
ಹಿಡಿದೆಳೆವ
ಕ೦ದನ "ಅಮ್ಮಾ..."
ದನಿಗೆ ತಿರುಗಿ
ನೋಡಿತ್ತು..
.
ಕರುಳ ಬಳ್ಳಿ
ಹಿಡಿದು ಎಳೆವಾಗ
ಕಾಲ್ ಕಟ್ಟಿತ್ತು..
.
ಹಿ೦ದೆ ಅನುಭವಿಸಿದ
ನೋವೆಲ್ಲ
ಕಣ್ಣ ಹನಿಯಾಗಿ
ಕರಗಿತ್ತು...
ಮನದ ಕದ ಮುಚ್ಚಿದಳು..!!
#ಮನೆಯ_ಬಾಗಿಲು_ತೆರೆದೇ_ಇತ್ತು.
>>ಶ್ರೀಮತಿ ಸಿ೦ಧು ಭಾರ್ಗವ್ . ಬೆ೦ಗಳೂರು.
ವಾವ್ ಅದ್ಭುತ
ReplyDeleteವಾವ್ ಅದ್ಭುತ
ReplyDelete