Monday 16 December 2019

ಭೂಮಿ ಪ್ರತಿಷ್ಠಾನ ಧಾರವಾಡ ಪುಸ್ತಕ ಬಿಡುಗಡೆ ಕಾರ್ಯಕ್ರಮ

🌿🌿🌿🌿🌿🌿🌿🌿🌿🌿

" ಭೂಮಿ ಪ್ರತಿಷ್ಠಾನ " ದ ಎಲ್ಲ ಸಹೄದಯ ಸಾಹಿತ್ಯ ಮನಸ್ಸುಗಳಿಗೂ ನಮಸ್ಕಾರಗಳು! ನಿನ್ನೆಯ ಡಿಸೆಂಬರ್ ೧೫-೨೦೧೯ ರವಿವಾರದಂದು ನಡೆದ ಕಾರ್ಯಕ್ರಮವನ್ನು ನಾನು ತಪ್ಪಿಸಿಕೊಂಡಿದ್ದರೆ ಬಹುಶಃ ಜೀವನದ ಬಹು ದೊಡ್ಡ ಸುಸಮಯವನ್ನು ಕಳೆದುಕೊಂಡಂತಾಗುತ್ತಿತ್ತು!
🌿 ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆಯಿತು!
🌿 ಅನುಭವಿಗಳಿಂದ, ಪ್ರಾಜ್ಞಃರಿಂದ ನಡೆಸಿಕೊಟ್ಟ ಉಪನ್ಯಾಸಗಳಂತೂ ಸದಾ ಮನನೀಯ !
🌿 ಭೂಮಿ ಪ್ರತಿಷ್ಠಾನದ ಎಲ್ಲ ಸದಸ್ಯರೂ ಸಹೄದಯತೆಯಿಂದ ನಡೆದುಕೊಂಡರು ಮತ್ತು ಕಾರ್ಯಕ್ರಮದ ಅಚ್ಚುಕಟ್ಟಿಗಾಗಿ ಶ್ರಮಿಸಿದ್ದಾರೆ.
🌿 ಆತಿಥ್ಯ ಕೂಡ ಚೆನ್ನಾಗಿತ್ತು.
🌿 ಅನುಭವಿಗಳಂತೆ ನೀವೆಲ್ಲ ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ, ಸ್ಮರಣೀಯವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿರಿ!
🌿ಯಾರಿಗೂ ಯಾವುದೇ ರೀತಿಯ ಅಸಹನೆಯುಂಟಾಗದಂತೆ ನಡೆಸಿದಿರಿ.
🌿 ಪ್ರಭುದ್ಧ ಭಾಷಣಗಳು ಮನಸೆಳೆದವು.
🌿 " ಮಲ್ಲಿಗೆಯ ಮಾಲೆ" ಕವನ ಸಂಕಲನದ ಹೊರ ವಿನ್ಯಾಸ, ಒಳಗಿನ ತಿರುಳು , ಉತ್ತಮ ಮಟ್ಟದ ಕಾಗದ ಸೂಪರ್!
🌿 ನಿಮ್ಮ ಈ ಕಾರ್ಯಕ್ರಮ ಬಹಳಷ್ಟು ಜನರಿಗೆ ಅನುಕರಣೀಯವಾಗಿತ್ತು.
ಈ ನಿಮ್ಮ ಶ್ರಮಕ್ಕೆ, ಸಾಧನೆಗೆ ನನ್ನ ಮನದಾಳದ ಹಾರೈಕೆಗಳು🙏💐
🍁🍀 ಮುಂಜಾನೆಯಿಂದ ರಾತ್ರಿ ತನಕ ಕಾರ್ಯಕ್ರಮದ ಜವಾಬ್ದಾರಿ, ಹಾಗೆಯೇ ಕವನವನ್ನು ಕಳುಹಿಸಲು ಆಹ್ವಾನ ನೀಡಿದ ದಿನದಿಂದ ಮುದ್ರಣ ಪುಸ್ತಕ ಕೈಗೆ ಬರುವ ತನಕವೂ ನುನ್ನೆಯ ಕಾರ್ಯಕ್ರಮ ಮುಗಿಯುವ ತನಕ ಶ್ರಮಿಸಿದ ಎಲ್ಕರಿಗೂ ಅಭಿನಂದನೆಗಳ ಅರ್ಪಿಸುವೆನು.
🍁🍀 ನನಗೆ ಕವನ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ದೊರೆತಿದ್ದು ಅಚ್ಚರಿ ಅಲ್ಲದೇ ಸಂತಸದ ವಿಷಯವಾಗಿತ್ತು. ಧಾರವಾಡಕ್ಕೆ ಬೇಂದ್ರೆ ಅಜ್ಜನ ಊರಿಗೆ ಬಂದದ್ದು ತುಂಬಾ ಸಂತೋಷ‌ವಾಯಿತು. ಭೂಮಿ ಕಾವ್ಯ ಪುರಸ್ಕಾರ ಪಡೆದ ಕ್ಷಣ ಎಂದೂ ಮರೆಯಲಾಗದು.

ಒಳ್ಳೆಯ ಕಾರ್ಯಕ್ರಮ ಹಲವಾರು ವರ್ಷ ಸದಾ ನೆನಪಿನಲ್ಲಿ ಉಳಿಯುವಂತಹುದು, ಮನಸ್ಸಿನಿಂದ ಮರೆಯಾಗಲಾರದಂತಹುದು!
ವಿ.ಸೂ:
( ಇಲ್ಲಿನ ಮಾಹಿತಿ ಮತ್ತು ಕೆಲವು ಚಿತ್ರಕೃಪೆಗಳು ವಾಟ್ಸ್ ಆಪ್ ಗ್ರೂಪಿನಿಂದ ಮತ್ತು ಭೂಮಿ ಪ್ರತಿಷ್ಠಾನ ಧಾರವಾಡದಿಂದ ವಂದನೆಗಳು💐)
💐💐💐💐💐💐💐💐💐






















💐ಶುಭಹಾರೈಕೆಗಳು💐


No comments:

Post a Comment