Sunday, 11 June 2017

ಕವನ : ಬಿಸಿಯುಸಿರು

ಬಿಸಿಯುಸಿರು


ನೆಮ್ಮದಿ ಇಲ್ಲದ ಬಾಳಿನಲಿ
ನೆಮ್ಮದಿಯ ಹುಡುಕುತ್ತಾ ಹೊರಟೆ..
ನನ್ನ ನೆರಳೇ ಹಿಂದುಮುಂದು
 ಹೋಗುತ್ತಿತ್ತು...
ಬಿಸಿಲಿಗೆ ಬಾಯಾರಿಕೆ ಹೆಚ್ಚಾಗಿ
ಬಾಯಿ ಒಣಗುತ್ತಿತ್ತು...
ನೆರಳು ಕೊಡುವ ಮರವೇ
ಮೂತಿ ತಿರುಗಿಸುತ್ತಿತ್ತು‌...
ಸಿಹಿ ಇಲ್ಲದ ಹಣ್ಣುಗಳು,
ಘಮವಿಲ್ಲದ ಹೂವುಗಳು.‌‌..
ಬರಡು ಬರಡು ಎನಿಸುವ
ಪ್ರಕೃತಿಗೇನೆ ನೆಮ್ಮದಿಯಿಲ್ಲ...
ಮಳೆರಾಯನ ಆಗಮನದ
ಸುಳಿವೇ ಇಲ್ಲ..
ತಂಪಿಲ್ಲ, ಮನಕೆ ಹಿತವಿಲ್ಲ..
ಸುತ್ತಮುತ್ತಲೂ ಎತ್ತಲೂ ಹಿತವೆಂಬುದಿಲ್ಲ...

- ಸಿಂಧು ಭಾರ್ಗವ್.

No comments:

Post a Comment