Wednesday 1 March 2017

ರಕ್ತದಾನದ ಬಗ್ಗೆ ಬರೆದ ಕವನಕ್ಕೆ ಸಮಾಧಾನಕರ ಬಹುಮಾನ ದೊರೆತದ್ದು ಮರೆಯಲಾಗದ ಕ್ಷಣ.

.

ರಕ್ತದಾನ ಮಾಡುವುದರ ಬಗ್ಗೆ ಜಾಗ್ರತಿ ಮೂಡಿಸುವ ಸಲುವಾಗಿ  ನಡೆಸಿದ ರಾಜ್ಯಮಟ್ಟದ ಕವನ  ಸ್ಪರ್ಧೆಯಲ್ಲಿ ನನಗೆ ಸಮಾಧಾನಕರ ಬಹುಮಾನ ಸಿಕ್ಕಿದೆ👆🌷😍😘 9th place see 🌷😍👆
ಆಯೋಜಕರಿಗೆ ಅಭಿವಂದನೆಗಳು🙏
•••••••••••
 #ಕವನದ_ಶೀರ್ಷಿಕೆ : ರಕ್ತದಾನ
~~‌ ~~ ~~ ~~ ~~ ~‌~ ~~
ಕಾಲೇಜು ದಿನಗಳಲಿ ಅದೊಂತರಾ ಉತ್ಸಾಹ..
ರಕ್ತದಾನ ಮಾಡುವೆನೆಂದರೆ ಎಲ್ಲರದ್ದೂ ಪ್ರೋತ್ಸಾಹ..

ಉಚಿತವಾಗಿ ಸಿಗುವ ಒಂದು ಸೇಬಿಗಾಗಿ,
ಹತ್ತಾರು ಶಹಬ್ಬಾಸ್ ಗಿರಿಗಾಗಿ..
ಓಡುತ್ತಿದ್ದೆವು ರಕ್ತದಾನ ಮಾಡಲು
ತಾಮುಂದು ನಾಮುಂದಾಗಿ...

ಆಗೆಲ್ಲ ರಕ್ತದಾನದ ಮಹತ್ವ ತಿಳಿದವನೂ ಅಲ್ಲ,
ನನಗೂ ಅದರ ಅಗತ್ಯ
ಬರಬಹುದಾದ ಅರಿವೂ ಇರಲಿಲ್ಲ..

ಬಿಸಿರಕ್ತ, ಮೋಟಾರು ಬೈಕಿನಲಿ ಕುಳಿತರೂ
ಕುದುರೆ ಮೇಲೆ ಕುಳಿತ ಭಾವ..
ಲಗಾಮು ಇಲ್ಲದೇ ಓಡಿಸಿದ್ದಕ್ಕೆ
ನೆಲಕ್ಕುರುಳಿತು ಜೀವ..

ಪ್ರಜ್ಞೆ ತಪ್ಪಿತು, ಮುಂದೇನಾಯಿತು?
ದಡಬಡ ಎಂದು ತುರ್ತು ನಿಗಾ ಘಟಕಕ್ಕೆ ದೇಹ ಹೋಯಿತು..

ವೈಧ್ಯರು ಬಂದರು, ಸ್ನೇಹಿತರ ಕರೆದರು..
ಅಗತ್ಯವಾಗಿ ರಕ್ತ ಬೇಕಾಗಿದೆ..
ಆಸ್ಪತ್ರೆಯಲಿ ಸಂಗ್ರಹಿಸಿದ್ದು ಕಾಲಿಯಾಗಿದೆ..
ಅಲ್ಲಿ ಇಲ್ಲಿ ವಿಚಾರಿಸಿದರು, ಗೆಳೆಯರು ಗಾಬರಿಗೊಂಡರು..
ರಕ್ತದ ಬ್ಯಾಗಿಗಾಗಿ ಉಪಾಯ ಮಾಡಿದರು..

ಗೆಳೆಯನ ರಕ್ತವೇ ದೇಹಕ್ಕೆ ಸರಬರಾಜಾಯಿತು,
ಕೊನೆಯುಸಿರು ಕೂಡ ಸರಾಗವಾಯಿತು..

ಪಿಳಿಪಿಳಿ ಕಣ್ಣಿನಿಂದ ಮತ್ತೆ ಲೋಕ ನೋಡಿದೆ,
ಗೆಳೆಯ ನೀಡಿದ ರಕ್ತದಿಂದ ಮತ್ತೆ ಜೀವ ಬಂದಿದೆ,
ರಕ್ತದಾನದ ನಿಜವಾದ ಅರ್ಥ ಈಗ ಅರಿವಾಗಿದೆ..

"ರಕ್ತದಾನ ಶ್ರೇಷ್ಟ ದಾನ"
( ನಿಮ್ಮಿಂದ ಒಂದು ಜೀವ ಉಳಿಯುವುದೆಂದಾರೆ ಯಾಕೆ ರಕ್ತದಾನಕ್ಕೆ‌ ಮುಂದಾಗಬಾರದು)

- ಸಿಂಧು ಭಾರ್ಗವ್   

No comments:

Post a Comment