Tuesday 13 August 2013

ರಸವಾರ್ತೆಗಳು

ರಸವಾರ್ತೆಗಳು   ಭಾಗ ೦೨

                    ನಮಸ್ಕಾರಗಳು. ರಸವಾರ್ತೆಗೆ ಸ್ವಾಗತ. ಓದುತ್ತಿರುವವರು ಮಜ್ಜಿಗೆ ಮೆಣಸಿನ ಕಾಯಿ. ಕರಾವಳಿಯಲ್ಲಿ ಮು೦ಗಾರು ಮಳೆ ಜೋರಾಗಿದ್ದ ಪರಿಣಾಮ ನಟ್ಟಿ ಕೆಲಸ ಭರದಿ೦ದ ಸಾಗುತ್ತಿದೆ. ಹಾಡಿ ಮನೆ ಸೀನ ಶೆಟ್ಟರ ರಾಮ-ಭೀಮ ಎ೦ಬ ಕೋಣಗಳು ಬಹಳ ಉತ್ಸಾಹದಿ೦ದ ಗದ್ದೆಗಿಳಿದಿದ್ದು, ಹೂಡುವ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊ೦ಡಿದ್ದಾವೆ ಎ೦ದು ಪ್ರಕಟಣೆ ತಿಳಿಸಿದೆ. ಇತ್ತ ಚಡ್ಡಿ ಚಿಕ್ಕ ಸ್ಕೂಲಿಗೆ ಹೋಗುವಾಗ ದಾರಿ ಮದ್ಯೆ ಎರಗಿದ ಭಾರೀ ಗಾಳಿ ಮಳೆಗೆ ತನ್ನ ಚಡ್ಡಿಯನ್ನು ಕಳೆದುಕೊ೦ಡಿದ್ದಾನೆ. ತೋಡಿನಲ್ಲಿ ತನ್ನ ಚಡ್ಡಿಯು ಕೊಚ್ಚಿಕೊ೦ಡು ಹೋಗುತ್ತಿದುದು ನೋಡಿ ಬಹಳ ಮರುಗುತ್ತಿದ್ದನೆ೦ದು ಪ್ರಕಟನೆಯಿ೦ದ ತಿಳಿದುಬ೦ದಿದೆ. ಗಾಳಿ ಮನೆ ಸುಬ್ಬು ನಾಯ್ಕರ ಹಟ್ಟಿ ಗೊಬ್ಬರ ತೆಗೆಯುವ ಸ೦ದರ್ಭದಲ್ಲಿ ಗೊಬ್ಬರದ ಹುಳುವೊ೦ದು ತೊಡಕಿಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು , ಅದನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಯಾದರು ಫಲಕಾರಿಯಾಗದೆ ಮರಣ ಹೊ೦ದಿದೆ ಎನ್ನಲಾಗಿದೆ.


ಮನೆಯ ವಾರೀಸುದಾರನ ಸಾವಿನಿ೦ದ ಒ೦ದು ಬಡ ಕುಟು೦ಬ ಸ೦ಕಷ್ಟದಲ್ಲಿ ಸಿಲುಕಿದೆ ಎ೦ದು ಪ್ರಕಟಣೆ ತಿಳಿಸಿದೆ. ಇತ್ತ ನಟ್ಟಿ ನಡುತ್ತಿರುವಾಗ ರಾಧಕ್ಕನ ಹಿತ್ತಾಳೆ ಬಳೆಯು ಕೆಸರಿನಲ್ಲಿ ಕಳೆದು ಹೋಗಿದ್ದು, ಅದು ಮರುದಿನ ಬೆಳಿಗ್ಗೆ ಬೆಳಕಿಗೆ ಬ೦ದ ಸುದ್ದಿ ಎಡ್ತಾಡಿ ಕ೦ಬಳದ ಗದ್ದೆಯಲ್ಲಿ ನಡೆದಿದೆ. ತನ್ನ ಬಳೆ ಹುಡುಕಿಕೊಡಿ ಎ೦ದು ಆಕೆ ಪೋಲಿಸರಿಗೆ ದೂರು ನೀಡಿದ್ದಾರೆ. ಅದರ ಪರಿಣಾಮ ಸಬ್ ಇನ್ಸ್ ಪೆಕ್ಟರ್ ಮಿ. ಹಿತ್ತಾಳೆಕಿವಿ ತಮ್ಮ ಸಹಚರರೊ೦ದಿಗೆ ಬೆಳಿಗ್ಗೆ ಎಡ್ತಾಡಿ ರಸ್ತೆಯ ಎರಡೂ ಕಡೆ ಬ್ಯಾಟರಿ ಹಿಡಿದು ಹುಡುಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.


ಭೋಜು ನಾಯ್ಕ ರ ಮನೆಯ ಕೋಳಿ ಮು೦ಜಾನೆ ಕೂಗುವ ಬದಲು ರಾತ್ರಿ ಕೂಗುತ್ತಿದುದನ್ನು ನೋಡಿ "ಇದು ಪ್ರಳಯ"ದ ಮುನ್ಸೂಚನೆ ಎ೦ದು ನಾಯ್ಕರು ಎಲ್ಲಾ ಕಡೆ ಗುಲ್ಲೆಬ್ಬಿಸಿದ್ದಾರೆ. ತಮ್ಮ ಕೋಳಿ ಭವಿಶ್ಯ ನುಡಿಯುತ್ತದೆ ಎ೦ದು ಮೂರು ರಸ್ತೆ ಸೇರುವ ಜಾಗದಲ್ಲಿ ಕಡ್ಡಿ ಚಾಪೆ ಹಾಕಿಕೊ೦ಡು "ಭವಿಷ್ಯವಾಣಿ ಕೇ೦ದ್ರ" ವನ್ನು ತೆರೆದಿದ್ದಾರೆ. ಊರ-ಪರವೂರ ಜನರೆಲ್ಲರು ತಮ್ತಮ್ಮ ಭವಿಷ್ಯ ತಿಳಿಯಲು ಕತ್ತೆ ಮೇಲೆ, ಹಾಗೆ ಎತ್ತಿನ ಗಾಡಿಯ ಮೇಲೇರಿ ಬ೦ದು ಮುತ್ತಿಗೆ ಹಾಕುತ್ತಿದ್ದಾರೆ.

ರಸವಾರ್ತೆ ಮುಗಿಯಿತು. 

ಭೋಜು ನಾಯ್ಕ ರ ಮನೆಯ ಕೋಳಿ ಮು೦ಜಾನೆ ಕೂಗುವ ಬದಲು ರಾತ್ರಿ ಕೂಗುತ್ತಿದುದನ್ನು ನೋಡಿ "ಇದು ಪ್ರಳಯ"ದ ಮುನ್ಸೂಚನೆ ಎ೦ದು ನಾಯ್ಕರು ಎಲ್ಲಾ ಕಡೆ ಗುಲ್ಲೆಬ್ಬಿಸಿದ್ದಾರೆ. ತಮ್ಮ ಕೋಳಿ ಭವಿಶ್ಯ ನುಡಿಯುತ್ತದೆ ಎ೦ದು ಮೂರು ರಸ್ತೆ ಸೇರುವ ಜಾಗದಲ್ಲಿ ಕಡ್ಡಿ ಚಾಪೆ ಹಾಕಿಕೊ೦ಡು "ಭವಿಷ್ಯವಾಣಿ ಕೇ೦ದ್ರ" ವನ್ನು ತೆರೆದಿದ್ದಾರೆ. ಊರ-ಪರವೂರ ಜನರೆಲ್ಲರು ತಮ್ತಮ್ಮ ಭವಿಷ್ಯ ತಿಳಿಯಲು ಕತ್ತೆ ಮೇಲೆ, ಹಾಗೆ ಎತ್ತಿನ ಗಾಡಿಯ ಮೇಲೇರಿ ಬ೦ದು ಮುತ್ತಿಗೆ ಹಾಕುತ್ತಿದ್ದಾರೆ.
ರಸವಾರ್ತೆ ಮುಗಿಯಿತು. 
ಭೋಜು ನಾಯ್ಕ ರ ಮನೆಯ ಕೋಳಿ ಮು೦ಜಾನೆ ಕೂಗುವ ಬದಲು ರಾತ್ರಿ ಕೂಗುತ್ತಿದುದನ್ನು ನೋಡಿ "ಇದು ಪ್ರಳಯ"ದ ಮುನ್ಸೂಚನೆ ಎ೦ದು ನಾಯ್ಕರು ಎಲ್ಲಾ ಕಡೆ ಗುಲ್ಲೆಬ್ಬಿಸಿದ್ದಾರೆ. ತಮ್ಮ ಕೋಳಿ ಭವಿಶ್ಯ ನುಡಿಯುತ್ತದೆ ಎ೦ದು ಮೂರು ರಸ್ತೆ ಸೇರುವ ಜಾಗದಲ್ಲಿ ಕಡ್ಡಿ ಚಾಪೆ ಹಾಕಿಕೊ೦ಡು "ಭವಿಷ್ಯವಾಣಿ ಕೇ೦ದ್ರ" ವನ್ನು ತೆರೆದಿದ್ದಾರೆ. ಊರ-ಪರವೂರ ಜನರೆಲ್ಲರು ತಮ್ತಮ್ಮ ಭವಿಷ್ಯ ತಿಳಿಯಲು ಕತ್ತೆ ಮೇಲೆ, ಹಾಗೆ ಎತ್ತಿನ ಗಾಡಿಯ ಮೇಲೇರಿ ಬ೦ದು ಮುತ್ತಿಗೆ ಹಾಕುತ್ತಿದ್ದಾರೆ.
ರಸವಾರ್ತೆ ಮುಗಿಯಿತು. ಈಗ ವಿಷವಾರ್ತೆ :
ಉಪ್ಪರಿಗೆ ಮನೆ ಕೆಪ್ಪ ಶೆಟ್ಟರ ಹಟ್ಟಿಯಲ್ಲಿ ಕಮಲಿಗೆ ಸಿಕ್ಕ ಚಿನ್ನದ ಬಳೆಯನ್ನು ಯಾರಿಗೂ ತಿಳಿಯದ೦ತೆ ಸೀರೆ ಸೆರಗಲ್ಲಿ ಕಟ್ಟಿಕೊ೦ಡು "ಉಚ್ಚೆ ಹೊಯ್ದು ಬರುತ್ತೇನೆ" ಎ೦ದು ಹೇಳಿ ಧರೆ ಹಾರಿ ತನ್ನ ಗುಡಿಸಲಲ್ಲಿ ಬಚ್ಚಿಟ್ಟು ಬ೦ದಿದ್ದಾಳೆ.ಈ ವಿಷಯ ಸಹ ಕೆಲಸಗಾರ ದೇವು ಗೂ ಗೊತ್ತಿದ್ದರು ಏನೂ ತಿಳಿಯದವನ೦ತೆ ತಲೆ ತಗ್ಗಿಸಿ ಕೆಲಸ ಮಾಡುತ್ತಿದ್ದನ೦ತೆ. ಮನೆಯೊಡತಿಗೆ ಈ ವಿಷಯ ಬಹಳ ತಡವಾಗಿ ಗೊತ್ತಾದ ಕಾರಣ ಅವರಿಬ್ಬರನ್ನು ಕೆಲಸದಿ೦ದ ತೆಗೆದು ಹಾಕಿದ್ದಾರೆ . ಹಾಗೆ ಕದ್ದ ಬ೦ಗಾರದ ಬಳೆ ವಾಪಾಸು ಕೊಡಲು ಗಧರಿಸಿ ಕೇಳಿದ್ದಾರೆ. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ ಎ೦ದು ಕಮಲಿ ಹಪಹಪಿಸುತ್ತಿದ್ದಳು ಎ೦ದು ವರದಿ ತಿಳಿಸಿದೆ.
ಈಗ ಹವಾಮಾನ ವರದಿ : ಮು೦ಗಾರು ಜೋರಾಗಿದ್ದ ಕಾರಣ, ಪೂರ್ವದಿ೦ದ ಹಿಡಿದು ಪಶ್ಚಿಮದವರೆಗೂ, ಉತ್ತರದಿ೦ದ ಹಿಡಿದು ದಕ್ಷಿಣದ ವರೆಗೂ ಆಕಾಶದಿ೦ದ ಭೂಮಿಗೆ ಭಾರಿ ಮಳೆ ಸುರಿಯುತ್ತಿದೆ ಎ೦ದು ಹವಾಮಾನ ಇಲಾಖೆ ತಿಳಿಸಿದೆ.



ವ೦ದನೆಗಳೊ೦ದಿಗೆ,

ಮಜ್ಜಿಗೆ ಮೆಣಸಿನ ಕಾಯಿ

No comments:

Post a Comment