Thursday 6 April 2023

ಕೃಷ್ಣ ಪ್ರಿಯ ಕಲಾ ವೇದಿಕೆ ವಾರ್ಷಿಕೋತ್ಸವ

 

ನಮ್ಮ "ಕೃಷ್ಣ ಪ್ರಿಯ ಕಲಾ ವೇದಿಕೆ" ಕೇವಲ ಸಾಹಿತ್ಯಕ್ಕೆ ಮೀಸಲಾಗದೆ ಸಂಗೀತ ಕಲೆಗಳಲ್ಲಿ ಆಸಕ್ತಿ ಹೊಂದಿದವರಿಗೂ ವೇದಿಕೆಯನ್ನು ನೀಡುತ್ತಾ ಬಂದಿದೆ.

ಪ್ರಪ್ರಥಮ ವರುಷದ ವಾರ್ಷಿಕೋತ್ಸವಕ್ಕೆ ಹೋದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಈ ಬಾರಿ ಕೂಡ ವಾರ್ಷಿಕೋತ್ಸವ ನಡೆಯಲಿದೆ ಎಂದಾಗ ಭಾಗವಹಿಸಲು ಉತ್ಸುಕಳಾಗಿದ್ದೆ. ಏಕೆಂದರೆ

ಇದು ಮಹಿಳೆಯರ ಕನಸಿನ ಕೂಸು, ಮಹಿಳೆಯರು ಮಾತ್ರವಲ್ಲದೆ ಮಕ್ಕಳಿಗೂ ವೇದಿಕೆ ನೀಡುವ ಮೂಲಕ ನನಗೆ ಸ್ಪೂರ್ತಿ ನೀಡಿದ ವೇದಿಕೆ.

ಒಬ್ಬ ಹೆಣ್ಮಗಳು ಏನೇ ಕನಸು ಕಂಡರೂ ಕೂಡ ಅವಳಿಗೆ ಮದುವೆಯ ಮೊದಲು ಹೆತ್ತವರ ಬೆಂಬಲ‌ ಮದುವೆಯಾದ ನಂತರ ಪತಿ ಮಕ್ಕಳ ಬೆಂಬಲ ಸದಾ ಇರಬೇಕು. ಅಕ್ಕ ತಂಗಿಯರು ಒಗ್ಗಟ್ಟಿನಲ್ಲಿದ್ದು ಹಮ್ಮಿಕೊಂಡ ಯೋಜನೆ ಎಲ್ಲ ನಿಋವಾಹಕರ ಸಹಕಾರದೊಂದಿಗೆ ಮೂರು ವರುಷವನ್ನು ಪೂರೈಸಿದೆ‌. ರಮಾ ಸುದರ್ಶನ್ ಅವರ ಎನರ್ಜಿ ನಿಜಕ್ಕೂ ಮೆಚ್ಚಲೇ ಬೇಕು. 


(ನಮಗೂ ಸಾಮ್ಯತೆ ಇರುವ ಕಾರಣ ದಿವ್ಯಜಾ ಮೇಡಂ ನನಗೆ ಸ್ಪೂರ್ತಿ ಎಂದು ಹೇಳಿದೆ.)


ಎಲ್ಲರ ಸಾಹಿತ್ಯಾಸಕ್ತರ ಸಹಕಾರ ಸಿಕ್ಕಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುವೆನು‌.‌

ಇನ್ನು ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ ಎ. ಎಸ್. ದಿವ್ಯಜಾ ಬಾಲಾಜಿ ಅವರ ಬಳಗದ ಎರಡನೇ ಸಂಪಾದಕತ್ವ ಕೃತಿ ಕವನ ಸಂಕಲನ ಇದಾಗಿದೆ. ಸಾಹಿತ್ಯ ಲಾಲಿತ್ಯ -೨ ಎಂಬ ಹೆಸರಿನ ಈ ಕೃತಿಯಲ್ಲಿ ಯುವಕವಿಗಳು ಹಿರಿಯರು ಎಲ್ಲರ ಕವನಗಳ ಸಂಗ್ರಹವಾಗಿದೆ. ಇನ್ನು ದಿವ್ಯಜಾ ಮೇಡಂ ಅವರ ಕಥಾ ಸೌರಭ ಎಂಬ ಸ್ವರಚಿತ ಕಥಾ ಸಂಕಲನಕೂಡ ಇಂದು ಬಿಡುಗಡೆಯಾಯಿತು. 

ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಶಶಿಧರ್ ಕೋಟೆ ಅವರು, ಉದ್ಘಾಟನೆ ಆಶಯ ನುಡಿಯನ್ನು ಶ್ರೀಮತಿ ಚಿತ್ರಕಲಾ ಎಸ್. ಪ್ರಸಿದ್ಧ ಕಾದಂಬರಿಗಾರ್ತಿ ಅವರು ಆಗಮಿಸಿದ್ದರು. ಶ್ರೀ ಶಿವರಾಮು ಅವರು ನಿವೃತ್ತ ಸಹಾಯಕ ಅಧಿಕಾರಿಗಳು ಪೋಲಿಸ್ ಇಲಾಖೆ ಚನ್ನಪಟ್ಟಣ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಹಾಡು ಭರತನಾಟ್ಯ ಭಾಷಣ ಎಲ್ಲರ ಮನ ಮೆಚ್ಚುವಂತಿದ್ದು ರಮಾ ಸುದರ್ಶನ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ವಿಶೇಷವಾಗಿ ಕುಮಾರಿ ಅಪೇಕ್ಷಾ, ಶ್ರಾವಣಿ ಅವರಿಗೆ ಸನ್ಮಾನ ಮಾಡಲಾಯಿತು. ಹಿರಿಯ ಸಾಹಿತಿಗಳು ಕವಿಗಳಾದ ಶ್ರೀ ಪದ್ಮನಾಭ ಡಿ. ಹರಿನರಸಿಂಹ ಉಪಾಧ್ಯಾಯರು ಅವರಿಗೆ ಕೂಡ ಸನ್ಮಾನಿಸಿ ಗೌರವಿಸಲಾಯಿತು. 


ಒಂದು ಅಚ್ಚುಮೆಚ್ಚಿನ ಅಚ್ಚುಕಟ್ಟಾದ ಕಾರ್ಯಕ್ರಮ ನಾವು ಹೀಗೆ ಕಾರ್ಯಕ್ರಮ ಮಾಡಬೇಕು ಎಂದು ಸ್ಪೂರ್ತಿ ನೀಡುವ ಕಾರ್ಯಕ್ರಮ ಎನ್ನಬಹುದು. ಧನ್ಯವಾದಗಳು😊

- ತುಳಸಿ(ಸಿಂಧು ಭಾರ್ಗವ ಬೆಂಗಳೂರು)

No comments:

Post a Comment